Sunday, June 29, 2025
spot_imgspot_img
spot_imgspot_img

ಕಾರವಾರ: ಕೆಎಸ್ ಅರ್ ಟಿ ಸಿ ಬಸ್ ಗೆ ಬೆಂಕಿ- ತಪ್ಪಿದ ಅನಾಹುತ

- Advertisement -
- Advertisement -

ಕಾರವಾರ :ಕುಮಟಾ ಬಸ್ ಡಿಪೊದಲ್ಲಿ ಕೆಎಸ್ ಅರ್ ಟಿ ಸಿ ಬಸ್ ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟ ಘಟನೆ ಸೋಮವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ನಡೆದಿದೆ.

ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಬಸ್ ಪಕ್ಕದಲ್ಲಿ ಯಾವುದೇ ವಾಹನ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಬಸ್ ರವಿವಾರ ರೂಟ್ ಸಂಚಾರ ಮುಗಿಸಿ ಡಿಪೊದಲ್ಲಿ ನಿಂತಿತ್ತು. ಬೆಂಕಿ ಅನಾಹುತ ಹೇಗಾಯಿತು ಎಂದು ಪೊಲೀಸರು ತನಿಖೆ ನಡೆಸಬೇಕಾಗಿದೆ.ಆಗ್ನಿಶಾಮಕದಳ ಆಗಮಿಸಿ, ಬೆಂಕಿ ಆರಿಸಿದೆ. ಡಿಪೋದಲ್ಲಿ ಆತಂಕ ಮನೆ ಮಾಡಿದೆ. ಸಿಬ್ಬಂದಿ ಗಳಲ್ಲಿ ಮತ್ತು ಅಧಿಕಾರಿ ವರ್ಗದಲ್ಲಿ ಚರ್ಚೆ ನಡೆದಿದೆ.

- Advertisement -

Related news

error: Content is protected !!