- Advertisement -
- Advertisement -




ಪುತ್ತೂರು: ಕೃಷಿ ಭೂಮಿಗೆ ಪುಂಡರೊಂದಿಗೆ ಬಂದು ಅಕ್ರಮ ಪ್ರವೇಶ ಮಾಡಿ ಅಡಿಕೆ ತೋಟದಲ್ಲಿದ್ದ ಸುಮಾರು 6 ಗೋಣಿ ಅಡಿಕೆಯನ್ನು ಕಳವು ಮಾಡಿದ ಘಟನೆ ನಿನ್ನೆ ಚಿಕ್ಕಮುಡ್ನೂರು ಗ್ರಾಮದ ಉರಮಾಲು ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಉರಾಮಾಲು ನಿವಾಸಿ ಅನಿತಾ ಮತ್ತು ಅಮಿತಾ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಉರಮಾಲು ಅಬ್ದುಲ್ ರಝಾಕ್ ಎಂಬವರು ಕೃಷಿ ಭೂಮಿಯನ್ನು ಹೊಂದಿದ್ದು, ಅನಿತಾ ಮತ್ತು ಅಮಿತಾ ಎಂಬವರು ಪುಂಡರೊಂದಿಗೆ ಕೃಷಿ ಜಾಗಕ್ಕೆ ಬಂದು ಅಕ್ರಮ ಪ್ರವೇಶ ಮಾಡಿ ಅಡಿಕೆ ತೋಟದಲ್ಲಿದ್ದ ಸುಮಾರು 5 ಕ್ವಿಂಟಾಲ್ ಅಂದಾಜು ಮೌಲ್ಯ ರೂ. 25,000/- ದ ಅಡಿಕೆಯನ್ನು ಕಳವು ಮಾಡಿದ್ದಾರೆ ಎಂದು ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕಲಂ 329 (3), 303 (2), 3(5) ಬಿಎನ್ಎಸ್ ಕಾಯ್ದೆಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -