

ಕೊಳ್ಳಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೆತ್ತೂರು ಮೈದಾನದಲ್ಲಿ ಮೀನು ಮಾರುಕಟ್ಟೆ ಇರುವುದರಿಂದ ಸಾಲೆತ್ತೂರು ಮೈದಾನದ ಸುಮಾರು ಸಿರಿಂಮೀಟರ್ ಒಳಗಡೆ ಖಾಸಗಿ ವ್ಯಕ್ತಿಗಳಿಗೆ ಮೀನು ಮಾರಾಟ ಮಾಡುವ ಆಗಿ ಇಲ್ಲವೆಂದು ನಿಯಮವಿದೆ. ಬಹುಸಯ್ಯಾ ಸಮಾಜಕ್ಕೆ ಸೇರಿದಂತಹ ಒಬ್ಬ ವ್ಯಕ್ತಿ ಚಲಿಸುವಂತಹ ವಾಹನದಲ್ಲಿ ಕೆಲವೊಂದು ದಿನ ಮೀನು ಮಾರಾಟ ಮಾಡಿದರೆ ಸದ್ರಿ ಮೇಲೆ ಉಲ್ಲೇಖಿಸಿದಂತಹ ೩೦೦ಮೀಟರ್ ಒಳಗಡೆಯೂ ಆಗಿರಬಹುದು ಹೊರಗಡೆಯೂ ಆಗಿರಬಹುದು. ಇವರಿಗೆ ನಿರಂತರವಾಗಿ ಕಿರುಕುಳ ನೀಡುವಂತಹ ಕೆಲಸ ನಡೆಯುತ್ತಿದ್ದು, ಇದೇ ವ್ಯಾಪ್ತಿಯಲ್ಲಿ ಅಲ್ಪ ಸಂಖ್ಯಾತ ಸಮಾಜಕ್ಕೆ ಸೇರಿದ ವ್ಯಕ್ತಿಗಳು ವ್ಯಾಪಾರ ನಡೆಸಿದರೆ ಅದೇ ಅಲ್ಪಸಂಖ್ಯಾತ ಸಮಾಜಕ್ಕೆ ಸೇರಿದ ಪಂಚಾಯತ್ ಅಧ್ಯಕ್ಷರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ಹಾಗೂ ಅದರ ಬಗ್ಗೆ ಗಮನ ಹರಿಸಿಲ್ಲ. ಇವರು ಹೊಟ್ಟೆಪಾಡಿಗೋಸ್ಕರ ಯಾವುದೇ ನಿಯಮವನ್ನು ಉಲ್ಲಂಘಿಸದೆ ಈ ಮೇಲೆ ತಿಳಿಸಿದಂತಹ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಯನ್ನು ನಿರ್ಮಿಸದೆ ಚಲಿಸುವಂತಹ ವಾಹನದಲ್ಲಿ ಮೀನುವ್ಯಾಪಾರ ಮಾಡಿದರೆ ಹಾಗೂ ತನ್ನ ಸಂಸಾರಕ್ಕೋಸ್ಕರ ವ್ಯಾಪಾರವನ್ನು ನಡೆಸಿದರೆ ಅದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಹಾಗೂ ನಿಯಮದಂತೆ ೩೦೦ಮೀಟರ್ ವ್ಯಾಪ್ತಿಯಲ್ಲಿ ಮೀನು ಮಾರುಕಟ್ಟೆಯನ್ನು ಬಿಟ್ಟು ಬೇರೆ ಯಾರು ಮೀನು ಮಾರುವಂತೆ ಯಾವುದೇ ಸಮಾಜಕ್ಕೂ ಈ ಅವಕಾಶ ದೊರಕುವಂತಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ಸಂಪ್ರದಾಯವನ್ನು ಕೈಬಿಡಬೇಕು ಹಾಗೂ ಸಾರ್ವಜನಿಕರ ಮನವಿಯನ್ನು ಧಿಕ್ಕರಿಸಿದರೆ ಸಾರ್ವಜನಿಕರು ಸಂವಿಧಾನಿಕವಾಗಿ ಕೊಳ್ಳಾಡು ಗ್ರಾಮ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡುವ ಸನ್ನಿವೇಶ ಉಂಟಾಗುತ್ತದೆ.ಈ ವಿಷಯದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಜನ ಸಾಮಾನ್ಯರಿಗೆ ಹಾಗೂ ಭಾರತದ ಎಲ್ಲಾ ನೈಜ ಪ್ರಜೆಗಳಿಗೆ ನ್ಯಾಯ ಒದಗಿಸಬೇಕಾಗಿ ಈ ಮೂಲಕ ವಿನಂತಿ, ತಪ್ಪಿದ್ದಲ್ಲಿ ಪಂಚಾಯಿತ್ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ. ಎಂದು ಕೊಳ್ಳಾಡು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದರೆ.