




ಕಲ್ಲಡ್ಕ ಸಮೀಪ ನೆಟ್ಟದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2ರಿಂದ 4ವರೆಗೆ ಅತಿಮಹಾರುದ್ರಯಾಗ ನಡೆಯಲಿದ್ದು, ಇದನ್ನು ಸಾರ್ವಜನಿಕವಾಗಿ ನಡೆಸುತ್ತಿರುವುದು ದಕ್ಷಿಣ ಭಾರತದಲ್ಲೇ ಮೊದಲು, ಯಾಗಕ್ಕೆ ನಾನಾ ಸಂತರು, ಗಣ್ಯರು ಯಾಗಕ್ಕೆ ಆಗಮಿಸಲಿದ್ದಾರೆ ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ಸಮಿತಿ ಉಪಾಧ್ಯಕ್ಷ ಸಚಿನ್ ರೈ ಮಾಣಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಅಜಿತ್ ಕುಮಾರ್ ಬರಿಮಾರು ಉಪಸ್ಥಿತೆರಿದ್ದರು.2ರಂದು ಶುಕ್ರವಾರ ಬೆಳಗ್ಗೆ 9ಕ್ಕೆ ಗಣಪತಿ ಹವನ, ನಿಟಿಲಾಕ್ಷ ಸದಾಶಿವ ದೇವರಿಗೆ ಶತರುದ್ರಾಭಿಷೇಕ, ಕಲಶಪ್ರತಿಷ್ಠೆ, ಪರಿವಾರ ದೇವತೆಗಳಿಗೆ ಕಲಶ ಪ್ರತಿಷ್ಠೆ, ಶತರುದ್ರ ಪಾರಾಯಣ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ದೇವತಾ ಪ್ರಾರ್ಥನೆ, ಯಾಗ ಮಂಟಪದಲ್ಲಿ ತೋರಣ ಮುಹೂರ್ತ, ವಾಸ್ತು ರಕ್ಷೆಘ್ನ ಹೋಮ, ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ರಂಗಪೂಜೆ. ಸಂಜೆ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲ್ಲಿಗದ ಮಾಯಾರೆ ಪಂಜುರ್ಲಿ ಎಂಬ ನಾಟಕ ಪ್ರದರ್ಶನ ನಡೆಯಲಿದೆ.ಮೇ 3ರಂದು ಬೆಳಗ್ಗೆ ೮ರಿಂದ ಪುಣ್ಯಾಹನಾಂದಿ, ಮಹಾಸಂಕಲ್ಪ, ಅರಣಿಮಥನ, ಅಗ್ನಿಜನನ, ಬ್ರಹ್ಮಕೂರ್ಚ ಹೋಮ, ಮಹಾಗಣಪತಿ ಹೋಮ, ಪವಮಾನ ಪ್ರಾಯಶ್ಚಿತ ಹೋಮ, ಕೂಷ್ಮಾಂಡ ಹೋಮ, ಮಂಟಪ ಸಂಸ್ಕಾರ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ. ಸಂಜೆ ೪ರಿಂದ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಮತ್ತು ಶ್ರೀ ೧೦೦೮ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಆಗಮನ. ಲಿಂಗತೋಭದ್ರ ಮಂಡಲ ಪೂಜೆ, ಕಲಶ ಪ್ರತಿಷ್ಠೆ, ಶತರುದ್ರ ಪಾರಾಯಣ,ಅಷ್ಟಾವಧಾನ. ಬೆಳಗ್ಗೆ ೬ರಿಂದ ಸಂಜೆ ೬ವರೆಗೆ ವಿವಿಧ ತಂಡಗಳಿಂದ ಭಜನೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ೮ಕ್ಕೆ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಶಂಭ್ರಮ ನಡೆಯಲಿದೆ.ಭಾನುವಾರ 4ರಂದು ಬೆಳಗ್ಗೆ ಗಂಟೆ ೫ರಿಂದ ಅತಿಮಹಾರುದ್ರಯಾಗ ಪ್ರಾರಂಭ ಬೆಳಗ್ಗೆ ೧೧ಕ್ಕೆ ಪೂರ್ಣಾಹುತಿ, ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ೬ರಿಂದ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.