







ಉಡುಪಿ: ಚಿಲ್ಲರೆ ಹಣಕ್ಕೆ ಸಂಬಂಧಿಸಿ ಮೆಡಿಕಲ್ ಶಾಪ್ನ ಮಹಿಳಾ ಸಿಬ್ಬಂದಿ ಮತ್ತು ಗ್ರಾಹಕಿ ಮಧ್ಯೆ ಜಗಳ ಏರ್ಪಟ್ಟು ಮೆಡಿಕಲ್ ಶಾಪ್ನ ಸಿಬ್ಬಂದಿಗೆ ಗ್ರಾಹಕಿ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.
ಗ್ರಾಹಕಿ ಯಾಸ್ಮಿನ್ ಹಲ್ಲೆ ಮಾಡಿದ ಆರೋಪಿ. ಮೆಡಿಕಲ್ ಶಾಪ್ ನ ಸಿಬ್ಬಂದಿ ಲಕ್ಷ್ಮೀ ಹಲ್ಲೆಗೊಳಗಾದ ಯುವತಿ.
ಮೆಡಿಕಲ್ ಶಾಪ್ನನಿಂದ ಔಷಧಿ ಖರೀದಿಸಿದ ಬಗ್ಗೆ ಗ್ರಾಹಕಿ ಯಾಸ್ಮಿನ್ ಐನೂರು ರೂಪಾಯಿ ನೋಟನ್ನು ನೀಡಿದ್ದರು. ಆಗ ಸಿಬ್ಬಂದಿ ಲಕ್ಷ್ಮೀ ತನ್ನ ಬಳಿ 500 ರುಪಾಯಿ ಚಿಲ್ಲರೆಯಿಲ್ಲ ಎಂದು ಹೇಳಿ ಫೋನ್ ಪೇ ಮಾಡಲು ಸಲಹೆ ನೀಡಿದ್ದಾರೆ. ಆಗ ಗ್ರಾಹಕಿ ಯಾಸ್ಮಿನ್ ಬೇರೆ ಅಂಗಡಿಯಿಂದ ಚಿಲ್ಲರೆ ತರುವಂತೆ ಹೇಳಿ ಏಕಾಏಕಿ ಲಕ್ಷ್ಮೀ ಅವರ ಕೆನ್ನೆಗೆ ಬಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿಂದಿಸಿ ಹಲ್ಲೆ ಮಾಡಿರುವ ಬಗ್ಗೆ ಲಕ್ಷ್ಮಿ ಅವರು ಪೊಲೀಸರಿಗೆ ದೂರು ನೀಡಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಗಳದ ವೀಡಿಯೋ ಮತ್ತು ಆಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ದಲಿತ ಯುವತಿಯ ಮೇಲೆ ನಡೆದ ಹಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಲಕ್ಷ್ಮಿ ಅವರು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾಸ್ಮಿನ್ ವಿರುದ್ಧ ಜಾತಿನಿಂದನೆ, ದಲಿತ ದೌರ್ಜನ್ಯ, ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ವುದಾಗಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ.