Saturday, June 28, 2025
spot_imgspot_img
spot_imgspot_img

ನೆಟ್ಲ ಮುಡ್ನೂರು ಶಕ್ತಿ ಕೇಂದ್ರದ ವತಿಯಿಂದ ನೆರಳಕಟ್ಟೆ ಪಂಚಾಯತ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ

- Advertisement -
- Advertisement -

ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ನೆಟ್ಲ ಮುಡ್ನೂರು ಶಕ್ತಿ ಕೇಂದ್ರದ ವತಿಯಿಂದ ನೆರಳಕಟ್ಟೆ(ಗಣೇಶ ನಗರ) ಪಂಚಾಯತ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಕ್ತಿ ಕೇಂದ್ರ ಪ್ರಮುಖ್ ಶ್ರೀ ಧನಂಜಯ ಗೌಡ ವಹಿಸಿದ್ದರು.ಮಾಣಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಶ್ ಭಂಡಾರಿ ಪ್ರದಾನ ಭಾಷಣ ಮಾಡಿದರು.ನೆರಳಕಟ್ಟೆ ಸೊಸೈಟಿ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಪಂಚಾಯತ್ ಸದಸ್ಯೆರಾದ ಶ್ರೀಮತಿ ಸುಜಾತಾ ಜಗದೀಶ್, ಶ್ರೀಮತಿ ಶಾಲಿನಿ ಹರೀಶ್, ಸೊಸೈಟಿ ನಿರ್ದೇಶಕರಾದ ಅಶೋಕ್ ರೈ, ಮಂಡಲ ಮೋರ್ಚಾ ಕಾರ್ಯದರ್ಶಿ ಗೋಪಾಲ್ ಕಾರಾಗುಡ್ಡೆ, ಬೂತ್ ಅಧ್ಯಕ್ಷರಾದ ಬಾಲಕೃಷ್ಣ ಗೌಡ, ಲೋಕೇಶ್ ಗೌಡ, ಶ್ರೀ ದಿನಕರ್ ನಾಯಕ್ ಹಾಗು ಬೂತ್ ಕಾರ್ಯದರ್ಶಿಗಳು ಸಮಿತಿ ಸದಸ್ಯರು ಸೇರಿದಂತೆ ಹಲವಾರು ಕಾರ್ಯಕರ್ತರು, ಗ್ರಾಮದ ಪಕ್ಷ ಪ್ರಮುಖರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೂಲಕ ಕರ್ನಾಟಕ ರಾಜ್ಯಪಾಲಾರಿಗೆ ಮನವಿ ನೀಡಲಾಯಿತು.ಪ್ರತಿಭಟನಾ ಕಾರ್ಯಕ್ರಮದ ಮೊದಲು ಜನಸಂಘ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿವಸ ಆಚರಿಸಲಾಯಿತು. ಪಂಚಾಯತ್ ಸದಸ್ಯ ಶ್ರೀ ಅಶೋಕ್ ರೈ ಸ್ವಾಗತಿಸಿ, ವಂದಿಸಿದರು.

- Advertisement -

Related news

error: Content is protected !!