


ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಇವರ ರಾಜಕೀಯ ಪ್ರೇರಿತ ಬಂಧನವನ್ನು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಉಗ್ರವಾಗಿ ಖಂಡಿಸುತ್ತಿದೆ.
ಈ ಪ್ರಕರಣವು 6 ತಿಂಗಳ ಹಿಂದೆ ನಡೆದ ಬಸ್ ಚಾಲಕನ ಅಜಾಗರೂಕತೆಯಿಂದ ಬೈಕ್ಗೆ ಮತ್ತು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸವಾರರಿಗೆ ಗಂಭಿರ ಗಾಯವಾಗಿದ್ದು ಅಪಘಾತಕೊಳಗಾಗಿದ್ದ ಬಡ ಕುಟುಂಬಕ್ಕೆ ಬಸ್ ಮಾಲಿಕನಿಂದ ಗಾಯಾಳುಗಳಿಗೆ ಸ್ಥಳದಲ್ಲೆ ಪರಿಹಾರ ನೀಡಬೆಕೆಂದು ಪ್ರತಿಭಟನೆ ಮಾಡಿ ಬಡಕುಟುಂಬಕ್ಕೆ ಪೊಲೀಸರ ಮೂಲಕ ಬಸ್ ಮಾಲಿಕನಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಪರಿಹಾರದ ಹಣ ಬಸ್ ಮಾಲಿಕ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಅಪಘಾತ ನಡೆದ ಸ್ಥಳದಲ್ಲಿ ಕಾಲೇಜು ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬಸ್ಸಿಗೆ ಹಾನಿ ಮಾಡಲಾಗಿತ್ತು. ಇದರ ವಿರುದ್ಧ ಬಸ್ ಮಾಲಿಕ ಠಾಣೆಗೆ ದೂರು ನೀಡಿದ್ದು 6 ತಿಂಗಳಿನಿಂದ ಪೊಲೀಸರು ಈ ಬಗ್ಗೆ ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ನಿನ್ನೆ ನೋಟಿಸ್ ನೀಡದೆ ಸಮಿತ್ ರಾಜ್ ರನ್ನು ಬಂಧನ ಮಾಡಲಾಗಿತ್ತು.
ಈ ಬಂಧನದ ಹಿಂದೆ ರಾಜಕೀಯ ಕೈವಾಡವಿದ್ದು ಹಿಂದೂ ನಾಯಕರನ್ನು ಧಮನಿಸುವ ಎರಡನೇ ಸುತ್ತಿನ ನಾಟಕಕ್ಕೆ ಇಲಾಖೆಯ ಮೂಲಕ ಚಾಲನೆ ನೀಡಲಾಗಿದೆ ಮತ್ತು ನೊಂದ ಬಡ ಕುಟುಂಬಕ್ಕೆ ಪರಿಹಾರ ತೆಗೆಸಿ ಕೊಡುವುದು ಕಾನೂನಿನಲ್ಲಿ ಅಪರಾಧವೇ ಆಗಿದ್ದಲ್ಲಿ ಈ ಪರಿಹಸರ ತೆಗೆಸಿಕೊಡುವುದರಲ್ಲಿ ಸಹಕರಿಸಿದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಬೇಕೆಂದು ಒತ್ತಾಯ ಮಾಡುತ್ತಿದ್ದೇವೆ. ಮತ್ತು ಪೊಲೀಸರ ದಕ್ಷತೆಯ ಕಾನೂನು ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಒಂದು ವೇಳೆ ದಕ್ಷತೆಯ ಹೆಸರಿನಲ್ಲಿ ಹಿಂದೂ ಸಮಾಜದ ನಾಯಕರನ್ನು ಧಮನಿಸಲು ಹೊರಟರೆ ನಿಮ್ಮದಕ್ಷತೆಯೇ ಪ್ರಶ್ನಾರ್ಹವಾಗಿರುತ್ತದೆ. ಇಂತಹ ಘಟನೆಗಳು ಮುಂದುವರಿದರೆ ಕಾನೂನಾತ್ಮಕವಾಗಿ ಪೂರ್ಣ ಹಿಂದೂ ಸಮಾಜವನ್ನು ಸೇರಿಸಿ ಪ್ರತಿಭಟನೆ ಮಾಡುವ ಅನಿವಾರ್ಯತೆ ಇದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದೆ.