Sunday, June 29, 2025
spot_imgspot_img
spot_imgspot_img

ಉಳ್ಳಾಲ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ. ಪಬ್‍ಜಿ ಆಟದ ವಿಚಾರವೇ ಬಾಲಕನ ಕೊಲೆಗೆ ಕಾರಣವೇ..?

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ಬಳಿ ನಾಪತ್ತೆಯಾಗಿದ್ದ ಬಾಲಕನೋರ್ವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕ ಪಬ್ ಜಿ ಗೇಮ್‍ಗೆ ಅಡಿಕ್ಟ್ ಆಗಿದ್ದ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

driving

ಕೆ.ಸಿ ರೋಡ್‍ನ ಹನೀಫ್ ಎಂಬವರ ಪುತ್ರ ಹಕೀಫ್(13) ಮೃತದೇಹ ಮನೆಯಿಂದ 3 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಏ. 3ರಂದು ಸಂಜೆ ಪೋಷಕರು ಬಾಲಕ ಕಾಣೆಯಾಗಿರುವುದಾಗಿ ದೂರನ್ನು ನೀಡಿದ್ದರು. ಇಂದು ಬಾಲಕ ಮೃತದೇಹ ಪತ್ತೆಯಾಗಿದ್ದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪಬ್ ಜಿ ಗೇಮ್ ವಿಚಾರಕ್ಕೆ ಸಂಬಂಧಿಸಿ ಬಾಲಕರ ನಡುವೆ ನಡೆದ ಸಂಘರ್ಷ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!