- Advertisement -
- Advertisement -
ಕೋಟ: ಚಿತ್ರಪಾಡಿಯಿಂದ ಸಾಲಿಗ್ರಾಮ ಕಡೆ ಹೊರಟ ಸ್ಕೂಟಿಗೆ ಹಿಂದಿನಿಂದ ಅತಿವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಾಲಿಗ್ರಾಮ ಗುರುನರಸಿಂಹ ಕಲ್ಯಾಣ ಮಂಟಪ ಎದುರು ನೆಡೆದಿದೆ.
ಚಿತ್ರಾಪಾಡಿಯ ಸತೀಶ್ ಆಚಾರಿ ( 42) ಹಾಗೂ ಸುಬ್ರಮಣ್ಯ (13) ಗಾಯಗೊಂಡವರು.
ಕಾರು ಹಿಂದಿನಿಂದ ಬಂದು ಸ್ಕೂಟಿಗೆ ಢಿಕ್ಕಿ ಹೊಡೆದು ನಂತರ ಕಾರನ್ನು ನಿಲ್ಲಿಸದೆ ಪರಾರಿಯಗಳು ಯತ್ನಿಸಿದ್ದು, ಸಾಸ್ತಾನ ಟೋಲ್ ಹತ್ತಿರ ಟೋಲ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
- Advertisement -