- Advertisement -
- Advertisement -
ಬೋಳಂತೂರು: ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೋಳಂತೂರು ಪರಿಸರದಲ್ಲಿ, ಸೇವಾ ರಂಗದಲ್ಲಿ , ಬಡ,ನಿರ್ಗತಿಕ,ಅನಾಥ ಕುಟುಂಬಗಳಿಗೆ ಆಸರೆಯಾಗಿದ್ದು, ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೋಳಂತೂರು ವ್ಯಾಪ್ತಿಯ ಸುಮಾರು 100 ಕ್ಕೂ ಅಧಿಕ ಕುಟುಂಬಗಳಿಗೆ ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಹಿಂದೂ ಮುಸ್ಲಿಮರೆಂಬ ಭೇಧಭಾವವಿಲ್ಲದ ಟ್ರಸ್ಟ್ ನ ಸೇವಾಕಾರ್ಯವು ಸರ್ವ ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಶೆರೀಫ್ ಎನ್.ಸಿ.ರೋಡ್, ಉಪಾಧ್ಯಕ್ಷ ಸಿದ್ಧೀಕ್ ಕುಡುಂಬಕೋಡಿ, ಕಾರ್ಯದರ್ಶಿ ಖಾದರ್, ಖಜಾಂಜಿ ಶೆರೀಫ್ ಸರಪಾಡಿ, ಹಾರಿಸ್ ನಾರಂಕೋಡಿ, ರಫೀಕ್ ನಾರಂಕೋಡಿ, ಅಮೀರ್ ಮಜಲುಕೋಡಿ, ಕಬೀರ್ ಎನ್.ಸಿ.ರೋಡ್, ಬಶೀರ್ ಶಿವಮೊಗ್ಗ, ಕಲಂದರ್ ಶಾ ಮೊದಲಾದವರು ಉಪಸ್ಥಿತರಿದ್ದರು.
- Advertisement -