ಕೆದಿಲ ಗ್ರಾಮದ ಪಾಟ್ರಕೊಡಿಯಲ್ಲಿ ಕೆ. ಸಿ. ಎಫ್ ಸದಸ್ಯರಾದ ಹಮೀದ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ, ಎಸ್. ವ್ಯೆ. ಎಸ್, ಎಸ್. ಎಸ್. ಎಫ್. ಕೆ. ಸಿ. ಎಫ್. ಸಂಘಟನೆಯ ಸದಸ್ಯರ ಸಮ್ಮುಖದಲ್ಲಿ ಸೂಕ್ತ ಸದಸ್ಯರನ್ನು ಅಯ್ಕೆಮಾಡಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ ಬಿ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಟಿ ತಸ್ರೀಪ್, ಕೋಶಾಧಿಕಾರಿ ಬಷೀರ್ ಎಂ, ಉಪಾಧ್ಯಕ್ಷರಾಗಿ ಆದಂ ಬನ್ನೂರು, ಜೊತೆ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಲೆಕ್ಕ ಪರಿಶೋಧಕ ಕೆ ಎಸ್ ಯುಸುಫ್ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾಸಿಂ ಪಾಟ್ರಕೋಡಿ, ಸುಲೈಮಾನ್ ಸಅದಿ, ಹಬೀಬ್ ಮುಹ್ಸಿನ್, ಮಜೀದ್ ಬಿ ಎಚ್, ಸಾಜಿದ್ ಎಂ, ಝುಬೈರ್ ಟಿ, ಝಿಯಾದ್ ಕೆ ಸಿ ಎಪ್, ಅಝೀಝ್ ಬಿ ಎಂ ಕೆ, ಕೆ ಪಿ ಕಲಂದರ್, ಹಮೀದ್, ಉಸ್ತಾದ್ ಸಂಪ್ಯ, ಸಲೀಂ ಕೆ, ರಫೀಕ್ ಮದನಿ ಪಾಟ್ರಕೋಡಿ, ಝುಬೈರ್ ಸಅದಿ, ಬಷೀರ್ ಕರಿಮಜಲ್, ನಿಶಾದ್ ಕೆ ಪಿ, ನಿಜಾಮುದ್ದೀನ್ ಬಿ ಎಚ್ ಆಯ್ಕೆಗೊಂಡರು. ಎಸ್ ವೈ ಎಸ್ ಕಾರ್ಯದರ್ಶಿ ರಫೀಕ್ ಮದನಿ ಸ್ವಾಗತಿಸಿ ಅಧ್ಯಕ್ಷ ಸುಲೈಮಾನ್ ಸಹದಿರವರು ಧನ್ಯವಾದವನ್ನು ಅರ್ಪಿಸಿದರು.