ಪುತ್ತೂರು: ವಿಶ್ವ ಬಿಲ್ಲವರ ಸೇವಾ ಚಾವಡಿ(ರಿ.) ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕ ಇದರ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 167 ನೇ ಜನ್ಮ ಜಯಂತಿಯ ಅಂಗವಾಗಿ “ಗುರು ಸ್ಮರಣೆ” ಗುರು ಸಂದೇಶ ಕಾರ್ಯಕ್ರಮ ನಡೆಯಿತು.
ಅಭಯ ಆಶ್ರಯ ಅಸೈಗೋಳಿ ಆಶ್ರಮದಲ್ಲಿ ಆಶ್ರಮದ ಹಿರಿಯ ಸದಸ್ಯೆಯಾದ ವಾಣಿ ಇವರ ದಿವ್ಯ ಹಸ್ತದಿಂದ ಶ್ರೀ ಗುರುಗಳ ಭಾವಚಿತ್ರಕ್ಕೆ ದೀಪವನ್ನು ಪ್ರಜ್ವಲಿಸಿ ಪುಷ್ಪಾರ್ಚನೆಗೈಯುವ ಮೂಲಕ ಆಶ್ರಮದ ಎಲ್ಲಾ ಹಿರಿಯ ಸದಸ್ಯರ ಜೊತೆಗೂಡಿ ಪ್ರಾರ್ಥನೆ ಗೈದು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಬಿಲ್ಲವರ ಸೇವಾ ಚಾವಡಿ ಇದರ ರೂವಾರಿಗಳಾದ ಚಂದ್ರಶೇಖರ್ ಪೂಜಾರಿ ಬಿ.ಸಿ.ರೋಡ್, ಉಪಾಧ್ಯಕ್ಷ ಅಜಿತ್ ಪೂಜಾರಿ ಪಜಿರು ಹಾಗೂ ಶಿವಕುಮಾರ್ ಮರಕ್ಕೂರು ಉಪಸ್ಥಿತರಿದ್ದರು.
ಯುವವಾಹಿನಿ(ರಿ) ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಅರ್ಚನಾ ಎಂ.ಬಂಗೇರ ಇವರು ಆಶ್ರಮದ ಹಿರಿಯರನ್ನು ಉದ್ದೇಶಿಸಿ ಗುರುವರ್ಯರ ತತ್ವ ಸಂದೇಶವನ್ನು ತಿಳಿಯಪಡಿಸಿ ಜನ್ಮ ಜಯಂತಿಯ ಪ್ರಯುಕ್ತ ಶುಭ ಕೋರಿದರು. ಯುವವಾಹಿನಿ(ರಿ) ಕೊಲ್ಯ ಘಟಕದ ನೂತನ ಅಧ್ಯಕ್ಷ ಶ್ರೀ ಮೋಹನ್ ಮಾಡೂರು ಇವರು ಮಾತನಾಡಿ ಶ್ರೀ ಗುರುವರ್ಯರ ಆಶೀರ್ವಾದವು ನಮಗೆಲ್ಲರಿಗೂ ಸದಾ ಇರಲಿ ಎಂದು ಪ್ರಾರ್ಥಿಸಿದರು.
ಈ ಶುಭ ಸಂದರ್ಭದಲ್ಲಿ ಯುವವಾಹಿನಿ ಕೊಲ್ಯ ಘಟಕದ ಸ್ಥಾಪಕ ಅಧ್ಯಕ್ಷ ಸುರೇಶ್ ಬಿ.ಕೊಲ್ಯ, ಮಾಜಿ ಅಧ್ಯಕ್ಷ ಆನಂದ ಮಲಯಾಳ ಕೋಡಿ, ನಿಕಟಪೂರ್ವ ಕಾರ್ಯದರ್ಶಿ ಸುಧಾ ಸುರೇಶ್, ಪ್ರಚಾರ ನಿರ್ದೇಶಕ ನಿತಿನ್ ಮಾಡೂರು ಉಪಸ್ಥಿತರಿದ್ದರು. ಅಭಯ ಆಶ್ರಮದ ನಿರ್ವಾಹಕಿ ಶ್ರೀಮತಿ ನಳಿನಿ ಸ್ವಾಗತಿಸಿ, ವಂದಿಸಿದರು. ಯುವವಾಹಿನಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ್ ಕುಂಪಲ ಇವರು ಪ್ರಾಸ್ತಾವಿಕತೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.