- Advertisement -
- Advertisement -
ಬೆಂಗಳೂರು: ಭೂಗತ ಪಾತಕಿ ಬಾಂಬೆ ರವಿ ಸೌತ್ ಆಫ್ರೀಕಾದಲ್ಲಿ ಕೊರೊನಾಗೆ ಬಲಿಯಾಗಿದ್ದಾನೆ.
ಕಳೆದ ವರ್ಷ ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ದೀಪಕ್ ಅವರಿಗೆ ಹಣಕ್ಕೆ ಧಮ್ಕಿ ಹಾಕಿ ಕೊಲೆಗೆ ಸುಪಾರಿ ನೀಡಿದ್ದನು. ಈ ಸಂಬಂಧ ಜಯನಗರ ಪೊಲೀಸರು ಸುಪಾರಿ ಹುಡುಗರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಬಾಂಬೆ ರವಿ ಬಂಧನಕ್ಕೂ ಪೊಲೀಸರು ವಿದೇಶಕ್ಕೆ ಹೋಗಿ ಹುಡುಕಾಡಿದ್ದರು. ಎರಡು ದಿನಗಳ ಹಿಂದೆ ಸೌತ್ ಆಫ್ರಿಕಾದ ಖಾಸಗಿ ಆಸ್ಪತ್ರೆಯಲ್ಲಿ ರವಿ ಸಾವನ್ನಪ್ಪಿದ್ದಾನೆ.
ಆಸ್ಪತ್ರೆ ಸೇರಿದ ಬಳಿಕ ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ಸೋದರ ದೀಪಕ್ ಕೊಲೆ ವಿಚಾರಕ್ಕೆ ಕ್ಷಮೆ ಕೇಳಿದ್ದು, ನನ್ನಿಂದ ತಪ್ಪಾಗಿದೆ ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ. ಇದರಲ್ಲಿ ಕೆಲವರು ನನ್ನನ್ನು ಬಳಸಿಕೊಂಡರು ಎಂದು ಬಾಂಬೆ ರವಿ ಕ್ಷಮೆಯಾಚಿಸಿದ್ದ ಎನ್ನಲಾಗಿದೆ.
- Advertisement -