Sunday, June 29, 2025
spot_imgspot_img
spot_imgspot_img

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ ಸುತ್ತ ಭದ್ರತೆಗಾಗಿ ಹಾಗೂ ಗೋಕಳ್ಳತನ ತಡೆಗಟ್ಟಲು ಆವರಣ ಗೋಡೆ ನಿರ್ಮಿಸುವಂತೆ ವಿ.ಹಿಂ.ಪ ಬಜರಂಗದಳ ಪುತ್ತೂರು ವತಿಯಿಂದ ಮನವಿ

- Advertisement -
- Advertisement -

ಪುತ್ತೂರು ತಾಲೂಕು ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇರುವ ದನಗಳ ಕಳ್ಳತನಕ್ಕೆ ಆನೇಕ ಬಾರಿ ಪ್ರಯತ್ನ ನಡೆದಿರುವುದು ಹಾಗೂ ದೇವಾಲಯದ ಜಾಗ ಅತಿಕ್ರಮಣ ನಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಹಾಗೂ ನಿನ್ನೆ ನಡೆದ ಗೋಕಳ್ಳತನ ಪ್ರಯತ್ನಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ದೇವಾಲಯದ ಸ್ಥಳ ಅತಿಕ್ರಮಣ ತಡೆಯಲು ತಕ್ಷಣವೇ ಜಾಗವನ್ನು ಗುರುತಿಸಿ ಅವರಣ ಗೋಡೆ ನಿರ್ಮಾಣ ಮಾಡಿ ದೇವಾಲಯದ ಸೊತ್ತುಗಳನ್ನು ರಕ್ಷಣೆ ಮಾಡುವಂತೆ ಪುತ್ತೂರಿನ ಹಿಂದೂ ಸಮಾಜ ಬಾಂಧವರ ಪರವಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್ , ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಉಪಾಧ್ಯಕ್ಷರಾದ ಸೇಶಪ್ಪ ಬೆಳ್ಳಿಪ್ಪಾಡಿ, ಬಜರಂಗದಳ ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೊಳ್ಪಾಡಿ, ಬಜರಂಗದಳ ನಗರ ಸಂಚಾಲಕ್ ಚೇತನ್ ಬೊಳ್ವಾರ್ ಉಪಸ್ಥಿತರಿದ್ದರು.

driving
- Advertisement -

Related news

error: Content is protected !!