- Advertisement -
- Advertisement -
ಉಡುಪಿ: ಕೇಸು ಒಂದರಲ್ಲಿ ಜೈಲು ಸೇರಿದ್ದ ವ್ಯಕ್ತಿಯೋರ್ವ ತನ್ನ ಹಿಂದಿನ ಸೇಡಿಗೆ ಪ್ರತಿಕಾರವಾಗಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದೆ ಘಟನೆ ನಡೆದಿದೆ. ಗವಂಜಿ ಶಾಯಿದ್ ಎಂಬಾತ ಕಾಡು ಕೋಣ ಕೊಂದು ಜೈಲು ಸೇರಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಜಾಮೀನು ಪಡೆದುಕೊಂಡಿದ್ದ ಆರೋಪಿ ತಾನು ಜೈಲಿಗೆ ಹೋಗಲು ಕಾರಣರಾದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಬೈಂದೂರಿನ ಒತ್ತಿನಣೆ ಏರಿನಲ್ಲಿ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ಹಲ್ಲೆಗೊಳಗಾದ ಬೈಂದೂರಿನ ಗುಲ್ವಾಡಿಯ ಅಬುಬಕ್ಕರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ನ.೧ ಅಬುಬಕ್ಕರ್ ರವರು ಅವರ ಗೆಳೆಯನೊಂದಿಗೆ ಕಾರಿನಲ್ಲಿ ಬೈಂದೂರಿನಿಂದ ಭಟ್ಕಳ ಕಡೆ ಹೋಗುತ್ತಿದ್ದರು. ಈ ವೇಳೆ ಗವಂಜಿ ಶಾಯಿದ್ ಅಬುಬಕ್ಕರ್ ಅವರ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
- Advertisement -