Sunday, June 29, 2025
spot_imgspot_img
spot_imgspot_img

ಪ್ರಿಯಕರನ ಜತೆ ಸೇರಿ ಗಂಡನನ್ನೆ ಕೊಂದ ಪತ್ನಿ..!

- Advertisement -
- Advertisement -
vtv vitla
vtv vitla

ಹಾಸನ: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮರಡಿಕೆರೆ ಗ್ರಾಮದ ಬಳಿ ನಡೆದಿದೆ.

ಬಂಧಿತ ಆರೋಪಿಗಳು ಶ್ರುತಿ, ಪ್ರಿಯಕರ ಚಂದ್ರಶೇಖರ, ಸ್ನೇಹಿತ ಧರ್ಮರಾಜ್ ಎನ್ನಲಾಗಿದೆ.

vtv vitla

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮರಡಿಕೆರೆ ಗ್ರಾಮದ ಬಳಿ ಡಿ.26ರಂದು ಸಂತೋಷ್(29) ಶವ ಸಿಕ್ಕಿತ್ತು. ಕೆಲಸ ಮುಗಿಸಿ ಬೈಕ್​ನಲ್ಲಿ ಬರುತ್ತಿದ್ದ ಸಂತೋಷ್ ಅಡ್ಡಗಟ್ಟಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಅಪಘಾತ ಎಂದು ಪತ್ನಿ ಬಿಂಬಿಸಲು ಯತ್ನಿಸಿದ್ದಾಳೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಸಂತೋಷ್, ಶ್ರುತಿ ಪ್ರೀತಿಸಿ ವಿವಾಹವಾಗಿದ್ದರು. 6 ವರ್ಷಗಳ ನಂತರ ಚಂದ್ರಶೇಖರನ ಜೊತೆ ಶ್ರುತಿ ಪ್ರೇಮಾಂಕುರವಾಗಿತ್ತು. ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿಯಾಗುತ್ತಾನೆಂದು ಹೆಂಡತಿ ಕೊಲೆ ಮಾಡಿಸಿದ್ದಾಳೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಶ್ರುತಿ, ಪ್ರಿಯಕರ ಚಂದ್ರಶೇಖರ, ಸ್ನೇಹಿತ ಧರ್ಮರಾಜ್ ಬಂಧಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!