Sunday, June 29, 2025
spot_imgspot_img
spot_imgspot_img

ತಂದೆ-ತಾಯಿಯಿಂದಲೇ ಮರ್ಯಾದಾ ಹತ್ಯೆಗೊಳಗಾದ ಅಪ್ರಾಪ್ತ ಮಗಳು

- Advertisement -
- Advertisement -

ಮೈಸೂರು: ತಂದೆಯೇ ಅಪ್ರಾಪ್ತ ಮಗಳನ್ನು ಹತ್ಯೆಗೈದ ಘಟನೆ ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಕಗ್ಗುಂಡಿ ಗ್ರಾಮದ ಸುರೇಶ್ ಮತ್ತು ಬೇಬಿ ದಂಪತಿಗಳ ಪುತ್ರಿ ಶಾಲಿನಿ (17) ಎಂಬಾಕೆ ಹತ್ಯೆಯಾಗಿರುವಾಗಿರುವ ಯುವತಿಯಾಗಿದ್ದಾಳೆ.

ಶಾಲಿನಿ ಪಿಯುಸಿ ಓದುತ್ತಿರುವ ಸಂದರ್ಭದಲ್ಲಿ ಪಕ್ಕದ ಗ್ರಾಮದ ದಲಿತ ಯುವಕ ಮಂಜು ಎಂಬಾತನನ್ನು ಪ್ರೀತಿಸುತ್ತಿದ್ದಳು. ಈಕೆ ಅಪ್ರಾಪ್ತೆಯಾದ ಕಾರಣ ಇದು ಬೇಡವೆಂದು ಎಷ್ಟು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಇದೇ ವೇಳೆ ಮಗಳು ಶಾಲಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ತಂದೆ ಸುರೇಶ್ ಮತ್ತು ಪ್ರೇಮಿ ಮಂಜು ನಡುವೆ ಗಲಾಟೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಶಾಲಿನಿಯಿಂದ ದೂರು ಕೊಡಿಸಲು ಮುಂದಾದ ವೇಳೆಯಲ್ಲಿ ಶಾಲಿನಿ ತನ್ನ ತಂದೆ -ತಾಯಿಗೆ ಉಲ್ಟಾ ಹೊಡೆದು, ತಂದೆ – ತಾಯಿ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಈ ಬಗ್ಗೆ ಸಿಡಿಪಿಒ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಸಿ ತಾನು ತಂದೆ ತಾಯಿಯೊಂದಿಗೆ ಹೋಗುವುದಿಲ್ಲ ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಯುವತಿಯನ್ನು ಮೈಸೂರಿನ ಬಾಲ ಮಂದಿರಕ್ಕೆ ಕಳುಹಿಸಿದ್ದರು.

ಕಳೆದ ಮೇ.18 ರಂದು ತಂದೆ ತಾಯಿ ಬಾಲಮಂದಿರಕ್ಕೆ ಹೋಗಿ ಮಗಳ ಮನ ಒಲಿಸಿ ಮಗಳ ಭವಿಷ್ಯದ ದೃಷ್ಟಿಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಮನೆಗೆ ಕರೆದುಕೊಂಡು ಬಂದಿದ್ದರು. ಬಂದ ನಂತರ ಹುಡುಗನ ಜೊತೆಗೆ ಹೋಗದಂತೆ ಅನೇಕ ದಿನಗಳು ಬುದ್ದಿವಾದ ಹೇಳಿದರೂ, ಕೇಳದ ಶಾಲಿನಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗನಿಗೆ ಮೇಸೇಜ್ ಮಾಡಿ ಸಂಪರ್ಕದಲ್ಲಿ ಇದ್ದಳು.

ಬಳಿಕ ಆದರೆ ಜೂ.6 ರಂದು ರಾತ್ರಿ ಮಗಳು ಮಂಜು ಮನೆಗೆ ಹೋಗುವುದಾಗಿ ಬಾಗಿಲು ತೆಗೆದು ಹೋಗುತ್ತಿದ್ದ ಸಂದರ್ಭದಲ್ಲಿ ತಂದೆ ಸುರೇಶ್‌ ಮಗಳನ್ನು ತಡೆಯಲು ಯತ್ನಿಸಿದ್ದಾರೆ. ಹಠ ಹಿಡಿದ ಮಗಳು ತಂದೆಯ ಮಾತನ್ನು ಕೇಳದೇ ಮುಂದೆ ಹೋಗಲು ಹೆಜ್ಜೆಯಿಟ್ಟಾಗ ಕೋಪಗೊಂಡ ಸುರೇಶ್‌ ಕತ್ತು ಹಿಸುಕಿದ್ದಾರೆ. ಪರಿಣಾಮ ಮಗಳು ಶಾಲಿನಿ ಸಾವನ್ನಪ್ಪಿದ್ದಾರೆ.

ನಂತರ ಶವವನ್ನು ತಾಯಿ, ಹುಡುಗ ಮಂಜು ಮನೆಯ ಬಳಿಗೆ ಸಾಗಿಸಲು ಬೈಕ್ ಮೂಲಕ ತೆರಳಿದ ಸಂದರ್ಭದಲ್ಲಿ ಸಾಧ್ಯವಾಗದೆ ಮನೆಯ ರಸ್ತೆ ಬದಿಯ ಜಮೀನಿನಲ್ಲಿ ಮಲಗಿಸಿ ಬಂದಿದ್ದಾಗಿ ತಂದೆ ಸುರೇಶ್ ಒಪ್ಪಿಕೊಂಡಿದ್ಧಾನೆ. ಮರುದಿನ ಬೆಳಿಗ್ಗೆ 6:30 ರ ವೇಳೆಯಲ್ಲಿ ತಂದೆ ಸುರೇಶ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳು ಬಂಧಿಸಿದ್ದಾರೆ. ದಂಪತಿಗಳಿಗೆ ಮತ್ತಿಬ್ಬರು ಮಕ್ಕಳಿದ್ದು ಈ ಕೃತ್ಯದಿಂದ ಮಕ್ಕಳು ಅನಾಥರಾಗಿದ್ಧಾರೆ.

vtv vitla
vtv vitla
- Advertisement -

Related news

error: Content is protected !!