- Advertisement -
- Advertisement -
ಬಸ್ಸಿನಲ್ಲಿ ಸಿಕ್ಕಿದ್ದ ಪರ್ಸ್ ಒಂದನ್ನು ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಸುರತ್ಕಲ್ ನಿಂದ ಮಂಗಳೂರಿಗೆ ಹೋಗುವಾ ರೇಷ್ಮಾ ಬಸ್ಸಿನಲ್ಲಿ ಕಾಲೇಜ್ ಹುಡುಗನ ಪರ್ಸ್ ಬಿದ್ದುಹೋಗಿತ್ತು. ಅದರಲ್ಲಿ ಅವನ ಹಣ ಹಾಗೂ ಆಧಾರ ಕಾರ್ಡ್ ಹಾಗೂ ಪಾನ್ ಕಾರ್ಡ್, ಕಾಲೇಜು ಐಡಿ ಇನ್ನಿತರ ಅವನ ಬೇಕಾಗುವ ದಾಖಲಾತಿ ಕಾರ್ಡ್ಗಳು ಅದರಲ್ಲಿತ್ತು.
ಇದನ್ನು ನೋಡಿದ್ದ ಶರತ್ ಶೆಟ್ಟಿ (ಕನ್ನಡ ಜಾಗೃತಿ ವೇದಿಕೆ ಉಡುಪಿ & ಮಂಗಳೂರು ವಲಯದ ಅಧ್ಯಕ್ಷರು) ಹಾಗೂ ಪ್ರಸಾದ್ ಸುರೇಶ್ ಮೂಲ್ಯ (ಆರ್ಟಿಸ್ಟ್) ಅವರು ಬಂದರ್ ಪೊಲೀಸ್ ಸ್ಟೇಷನ್ ಮೂಲಕ ಪರ್ಸನ್ನು ಕಳೆದುಕೊಂಡ ಯುವಕನಿಗೆ ಹಸ್ತಾಂತರಿಸಿದ್ದಾರೆ.
- Advertisement -