Sunday, June 29, 2025
spot_imgspot_img
spot_imgspot_img

ಬೈಕ್ ನಲ್ಲಿ ಬಂದ ತಂಡ – ಮಣಿಪಾಲ ಪ್ರೆಸ್ ಉದ್ಯೋಗಿಗೆ ಚೂರಿ ಇರಿತ

- Advertisement -
- Advertisement -

ಉಡುಪಿ: ಬೆಳ್ಳಂಬೆಳಗ್ಗೆ ಬೈಕ್ ನಲ್ಲಿ ಬಂದ ತಂಡವೊಂದು ಮಣಿಪಾಲ ಪ್ರೆಸ್ ಉದ್ಯೋಗಿಯೊರ್ವನಿಗೆ ಚೂರಿ ಇರಿದು ಮೊಬೈಲ್ ಕಸಿದು ದರೋಡೆಗೈದ ಘಟನೆ ಅಲೆವೂರು ಗುಡ್ಡೆಯಂಗಡಿ ಬಳಿ ಶನಿವಾರ ನಡೆದಿದೆ.

ಮಣಿಪಾಲ ಪ್ರೆಸ್ ನಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ಉದ್ಯಾವರ ನಿವಾಸಿಯೊರ್ವರು ಮುಂಜಾನೆ 5.15 ಸುಮಾರಿಗೆ ಅಲೆವೂರು ಗುಡ್ಡೆಯಂಗಡಿ ಬಳಿ ಹೋಗುತ್ತಿರುವ ಸಂದರ್ಭ ಎದುರಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಸವಾರನನ್ನು ತಡೆದು ಬೆಲೆ ಬಾಳುವ ವಸ್ತು ನೀಡುವಂತೆ ಬೆದರಿಸಿದ್ದರು ಎನ್ನಲಾಗಿದೆ, ಮೊದಲು ನಿರಾಕರಿಸಿದಾಗ ದರೋಡೆಕೋರರು ಚೂರಿ ತೆಗೆದು ಯುವಕನ ಹೊಟ್ಟೆಗೆ ಇರಿಯಲು ಮುಂದಾಗಿದ್ದರು.

ಇದನ್ನರಿತ ಯುವಕ ತಕ್ಷಣ ಕೈಯಲ್ಲಿ ತಡೆದಿದ್ದ ಎನ್ನಲಾಗಿದೆ. ನಂತರ ಯುವಕ ಬೊಬ್ಬ ಹೊಡಿದಿದ್ದು ಇದರಿಂದ ಹೆದರಿದ ದರೋಡೆಕೋರರು ಯುವಕನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಸ್ಥಳೀಯರು ಯುವಕನ ಬೊಬ್ಬೆ ಕೇಳಿ ಹೊರ ಬಂದಾಗ ದರೋಡೆಕೋರರು ಇತ ಕುಡಿದು ಬಿದ್ದಿದ್ದಾನೆಂದು ಹೇಳಿ ಸ್ಥಳದಿಂದ ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!