- Advertisement -
- Advertisement -
ಬೆಳ್ತಂಗಡಿ: ದಿ ಮಂಕಿ ಮ್ಯಾನ್ ಎಂದೇ ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿರಾಜ್ ಅವರು ಇದೀಗ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗಡಾಯಿಕಲ್ಲು (ಜಮಲಾಬಾದ್) ನರಸಿಂಹಘಡವನ್ನು ಏರಲು ಸಿದ್ಧತೆ ನಡೆಸಿದ್ದಾರೆ.
ಜ್ಯೋತಿರಾಜ್ ಕರ್ನಾಟಕದ ಚಿತ್ರದುರ್ಗದ ಮೂಲದವರಾಗಿದ್ದು ಇವರು ಪರ್ವತಾರೋಹಿಯಾಗಿದ್ದಾರೆ. “ಕೋತಿ ರಾಜು” ಅಥವಾ “ಮಂಕಿ ಕಿಂಗ್’ ಎಂದು ಕರೆಯಲ್ಪಡುವ ಅವರು ಚಿತ್ರದುರ್ಗ ಕೋಟೆಯನ್ನು ಸುರಕ್ಷತಾ ಪರಿಕರಗಳಿಲ್ಲದೆ ಕೇವಲ ಕೈ ಸಹಾಯದಿಂದಲೇ ಏರುವ ಮೂಲಕ ತಮ್ಮ ಅವಿರತ ಸಾಧನೆ ತೋರಿದ್ದಾರೆ.
ಇದೀಗ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಟಿಪ್ಪು ವಶದಲ್ಲಿದ್ದ ಕೋಟೆಯಾದ 1700 ಅಡಿಯಿರುವ ಗಡಾಯಿಕಲ್ಲನ್ನು ಫೆ.12 ರವಿವಾರ ಏರಲಿದ್ದಾರೆ. ಈಗಾಗಲೆ ತಮ್ಮ 8 ಮಂದಿಯ ತಂಡದೊಂದಿಗೆ ಆಗಮಿಸಿರುವ ಅವರು ಶುಕ್ರವಾರದಿಂದಲೆ ಕಾರ್ಯೋನ್ಮುಖರಾಗಿದ್ದಾರೆ.
- Advertisement -