Tuesday, May 14, 2024
spot_imgspot_img
spot_imgspot_img

ವಿಟ್ಲ: ಕೆಮಿಕಲ್ ಮಿಶ್ರಿತ ನೀರನ್ನು ಹಳ್ಳಕ್ಕೆ ಹರಿಬಿಡುತ್ತಿದ್ದ ಪ್ರಕರಣ; ಟ್ಯಾಂಕರ್‌ ಚಾಲಕ ಹಾಗೂ ಮಾಲಕನ ವಿರುದ್ಧ ಪ್ರಕರಣ ದಾಖಲು

- Advertisement -G L Acharya panikkar
- Advertisement -
vtv vitla

ವಿಟ್ಲ: ಸೆಫ್ಟಿಕ್ ಟ್ಯಾಂಕರ್‌ನಲ್ಲಿ ಕೇರಳದಿಂದ ತಂದ ಕೊಳಚೆ ಕೆಮಿಕಲ್ ಮಿಶ್ರಿತ ನೀರನ್ನು ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ನಿರಂತರವಾಗಿ ಹರಿಬಿಡುತ್ತಿದ್ದು, ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಇದೀಗ ಪ್ರಕರಣ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಹಳ್ಳಕ್ಕೆ ನಿರಂತರವಾಗಿ ಕಲುಷಿತ ನೀರನ್ನು ಇಳಿಸುತ್ತಿದ್ದರು ಈ ಬಗ್ಗೆ ಪಂಚಾಯತ್‌ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸೆಫ್ಟಿಕ್ ಟ್ಯಾಂಕರ್‌ನ ಚಾಲಕ ಹಾಗೂ ಮಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ಹಿನ್ನಲೆ:

ಕೇರಳದಿಂದ ತಂದ ಕೊಳಚೆ ಕೆಮಿಕಲ್ ಮಿಶ್ರಿತ ನೀರನ್ನು ಚೆಲ್ಲಡ್ಕ ಅಮೈ ಬಳಿಯ ಹಳ್ಳಕ್ಕೆ ನಿರಂತರವಾಗಿ ಬಿಡುವ ವಾಹನ ಸಮೇತ ಚಾಲಕನನ್ನು ಸಾರ್ವಜನಿಕರು ಹಿಡಿದ ಘಟನೆ ನಡೆದಿದೆ.

ಚೆಲ್ಲಡ್ಕ ಅಮೈ ಬಳಿಯ ಹಳ್ಳಕ್ಕೆ ದಿನಂಪ್ರತಿ ಕೇರಳದ ಕೊಳಚೆ ಕೆಮಿಕಲ್ ಮಿಶ್ರಿತ ನೀರನ್ನು ಹರಿಬಿಡುತ್ತಿದ್ದು, ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಸ್ಥಳಕ್ಕೆ ಕೇಪು ಪಂಚಾಯತ್ ಅಧ್ಯಕ್ಷರು, ಪಿಡಿಓ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!