Sunday, June 29, 2025
spot_imgspot_img
spot_imgspot_img

ವಾರದ ಹಿಂದೆ ಎರಡನೇ ಮದುವೆಯಾದ ಜೋಡಿ; ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣು..!

- Advertisement -
- Advertisement -

ಕಣ್ಣೂರು: ಮೂವರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಕಣ್ಣೂರಿನ ಚೆರುಪುಳ ಪಾಟಿಚಾಲ್‌ನಲ್ಲಿ ನಡೆದಿದೆ. ಮೃತರನ್ನು ಪಾಟಿಚಾಳ ಮೂಲದ ಶ್ರೀಜಾ, ಅವರ ಮಕ್ಕಳಾದ ಸುಜಿನ್ (12), ಸೂರಜ್ (10), ಸುರಭಿ (8) ಮತ್ತು ಅವರ ಎರಡನೇ ಪತಿ ಶಾಜಿ.

ಇಬ್ಬರು ತಮ್ಮ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಶ್ರೀಜಾ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಜಾ ಬುಧವಾರ ಬೆಳಗ್ಗೆ 6 ಗಂಟೆಗೆ ಚೆರುಪುಳ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ತನ್ನ ಮಕ್ಕಳನ್ನು ಕೊಂದಿದ್ದು, ನಾವೂ ಸಾಯುತ್ತೇವೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಇದರೊಂದಿಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ನಡುವೆ ಪೊಲೀಸರು ಸ್ಥಳೀಯರಿಗೂ ಮಾಹಿತಿ ನೀಡಿದ್ದರು. ಆದರೆ ಸ್ಥಳೀಯರು ಮತ್ತು ಪೊಲೀಸರು ಮನೆಗೆ ತಲುಪಿದಾಗ ಐವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಶ್ರೀಜಾ ಮತ್ತು ಶಾಜಿಯವರಿಗೆ ಇದು ಎರಡನೇ ಮದುವೆ. ಆತ್ಮೀಯರಾಗಿದ್ದ ಇಬ್ಬರು ವಾರದ ಹಿಂದೆ ಮದುವೆಯಾಗಿದ್ದರು. ನಂತರ ಶಾಜಿ ಶ್ರೀಜಾ ಜೊತೆ ವಾಸಿಸಲು ಪ್ರಾರಂಭಿಸಿದರು. ಪಾಟಿಚಾಲ್‌ನ ಮನೆಯಲ್ಲಿ ವಾಸವಾಗಿರುವ ಶ್ರೀಜಾ ಮತ್ತು ಶಾಜಿ ವಿಚಾರವಾಗಿ ಆಕೆಗೆ ಮೊದಲ ಪತಿ ಸುನೀಲ್‌ನೊಂದಿಗೆ ಸಮಸ್ಯೆ ಇತ್ತು. ಶ್ರೀಜಾ ಶಾಜಿಯೊಂದಿಗೆ ವಿವಾಹವಾದ ನಂತರ, ಆಕೆಯ ಮೊದಲ ಪತಿ ಸುನೀಲ್ ಕೆಲವು ದಿನಗಳಿಂದ ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಸುನೀಲ್ ಕೂಡ ಶ್ರೀಜಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಅವರ ಸಮಸ್ಯೆಗಳನ್ನು ಪರಿಹರಿಸಲು ಪೊಲೀಸರು ಬುಧವಾರ ಸಂಧಾನ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಈ ಮಧ್ಯೆ ಐವರೂ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!