- Advertisement -
- Advertisement -
ಮದುವೆ ಆಗುವುದಕ್ಕೆ ಹುಡುಗಿ ಕೊಡಲು ಯಾರು ಮುಂದೆ ಬರುತ್ತಿಲ್ಲ ಎಂದು ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಗುಡೇಕೋಟೆ ಗ್ರಾಮದ ಬಿ.ಮಧುಸೂದನ್ (26) ಎಂದು ಗುರುತಿಸಲಾಗಿದೆ.
ಮದುವೆಗಾಗಿ 3 ಹುಡುಗಿಯರನ್ನು ನೋಡಿ ಬಂದಿದ್ದನು. ಆದರೆ ಯುವಕನ ತಂದೆ ವರ್ತನೆ ಸರಿಯಿಲ್ಲ, ಅರೆ ಹುಚ್ಚನಂತೆ ವರ್ತಿಸುತ್ತಾರೆಂದು ಹುಡುಗಿ ಕಡೆಯವರು ಮದುವೆಗೆ ನಿರಾಕರಣೆ ಮಾಡಿದ್ದರು. ಇದರಿಂದ ನನಗೆ ಮದುವೆಯೇ ಆಗಲ್ಲವೆಂದು ಮನನೊಂದು ಮದ್ಯಪಾನಕ್ಕೆ ದಾಸ ಆಗಿದ್ದನು.
ಮೊದಲೇ ಮನನೊಂದಿದ್ದ ಯುವಕ ವಿಷ ಸೇವಿಸಿದ್ದನು. ಬಳಿಕ ಕುಟುಂಬಸ್ಥರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ. ಸದ್ಯ ಕೂಡ್ಲಿಗಿಯ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಕನ್ಯಾ ಸಿಗದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಸ್ ದಾಖಲಾಗಿದೆ.
- Advertisement -