- Advertisement -
- Advertisement -
ಹಿತ್ತಲಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ತ್ರಿಶೂರ್ನ ಮುರಿಚೂರ್ ಪಲ್ಲಿಯಾಮಲಂ ಬಳಿ ನಡೆದಿದೆ.
ಶಮೀರ್ ಅವರ ಪುತ್ರಿ ಆಸಿಯಾ ರೈಹಾನ್ ಎಂಬ ಮಗು ತ್ರಿಶೂರಿನ ಮುರಿಚೂರ್ ಪಲ್ಲಿಯಾಮಲಂ ಬಳಿ ಹಾವು ಕಡಿತದಿಂದ ಸಾವನ್ನಪ್ಪಿದೆ. ಆಸಿಯಾ ಇತರ ಮಕ್ಕಳೊಂದಿಗೆ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದಳು.ಈ ವೇಳೆ ಹಾವು ಕಚ್ಚಿದೆ. ಮಗುವಿನ ಚೀರಾಟ ಕೇಳಿ ಪೋಷಕರು ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿದೆ.
ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ. ಮಗುವಿನ ಸಾವಿನಿಂದ ಪೋಷಕರ ರೋಧನ ಮುಗಿಲು ಮುಟ್ಟಿದೆ.
- Advertisement -