Sunday, June 29, 2025
spot_imgspot_img
spot_imgspot_img

ರಸ್ತೆ ದಾಟುವ ವೇಳೆ ಲಾರಿ ಹರಿದು ಬಾಲಕಿ ಸಾವು..!

- Advertisement -
- Advertisement -

ತಾಯಿಯೊಂದಿಗೆ ರಸ್ತೆ ದಾಟುವ ವೇಳೆ ನೋಡುತ್ತಿದ್ದಂತೆ ಪುಟ್ಟ ಬಾಲಕಿ ಮೇಲೆ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರದ ಕೊಟ್ಟೂರು ತಾಲೂಕಿನ ಕೆ. ಅಯ್ಯನಹಳ್ಳಿ‌ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮೃತಪಟ್ಟ ಬಾಲಕಿ ಮೂಗಮ್ಮ ಎಂಬುವವರ ಪುತ್ರಿ ವರ್ಷಿಣಿ (4) ಎಂದು ಗುರುತಿಸಲಾಗಿದೆ.

ತಾಯಿ ತನ್ನಿಬ್ಬರ ಮಕ್ಕಳ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದಳು. ಈ ವೇಳೆ ಬಸ್ ಸ್ಟಾಪ್‌ನಲ್ಲಿ ಬಾಲಕಿ ವರ್ಷಿಣಿ ನಿಂತಿದ್ದಳು. ಲಾರಿ ರಸ್ತೆ ಮೇಲೆ ಸ್ಪೀಡ್ ಆಗಿ ಬರುತ್ತಿದ್ದಾಗ ಬಾಲಕಿ ಲಾರಿಯತ್ತ ಓಡಿ ಹೋಗಿದ್ದಾಳೆ. ಬಸ್ ಸ್ಟಾಪ್ ಎದುರು ಹಂಪ್ಸ್ ಇಲ್ಲದ ಕಾರಣ ವೇಗವಾಗಿ ಹೋಗುತ್ತಿದ್ದ ಲಾರಿ ಬಾಲಕಿ ಮೇಲೆ ಹರಿದಿದೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!