Tuesday, May 14, 2024
spot_imgspot_img
spot_imgspot_img

ಸುಬ್ರಹ್ಮಣ್ಯ : ರಕ್ತಕ್ಕೆ ಸಂಬಂದಪಟ್ಟ ಕಾಯಿಲೆಯಿಂದ ಬಳಲುತ್ತಿರುವ ಕು.ಸಂತೃಪ್ತಿಯ ಚಿಕಿತ್ಸೆಗೆ ಬೇಕಿದೆ ಸಹಾಯಹಸ್ತ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕುಮಾರ ಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ ಇಲ್ಲಿನ 5ನೇ ತರಗತಿ ವಿದ್ಯಾರ್ಥಿ ಅನುಷ ರೈ.ಎಂ ರವರ ಮಗಳು ಕು.ಸಂತೃಪ್ತಿ ಸುಮಾರು 3 ತಿಂಗಳಿಂದ ರಕ್ತಕ್ಕೆ ಸಂಬಂಧಪಟ್ಟ (‘High Risk Acute Myeloid Leukaemia”) ಅತೀ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇಲ್ಲಿ ಸುಮಾರು 2 ತಿಂಗಳಿಂದ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.

ಈ ಚಿಕಿತ್ಸೆಗೆ ಈಗಾಗಲೇ ಸುಮಾರು ರೂ.5 ಲಕ್ಷದವರೆಗೆ ಖರ್ಚಾಗಿರುತ್ತದೆ. ಈ ಕಾಯಿಲೆಗೆ Bone Marrow Transplant ಚಿಕಿತ್ಸೆಯನ್ನು ಅವಶ್ಯವಾಗಿ ಮಾಡಲೇಬೇಕು. ಇದಕ್ಕೆ ಸುಮಾರು ರೂ. 25 ಲಕ್ಷದ ವರೆಗೆ ವೆಚ್ಚ ತಗಲಬಹುದೆಂದು ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ರಾಜೇಶ್‌ಕೃಷ್ಣರವರು ತಿಳಿಸಿರುತ್ತಾರೆ.

ಇವರ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಇವರಿಗೆ ಸಹಾಯ ಹಸ್ತದ ಆವಶ್ಯಕತೆ ಇರುತ್ತದೆ. ಸಹೃದಯಿ ದಾನಿಗಳು ವಿದ್ಯಾರ್ಥಿನಿಯ ಚಿಕಿತ್ಸೆಯನ್ನು ಮುಂದುವರಿಸಲು ಸಹಾಯದ ಹಸ್ತ ನೀಡಬೇಕಾಗಿದೆ.

Name : Anusha Rai M
A/c. : 4031101000286
IFSC : CNRB0004031
Mobile : 9901316493

- Advertisement -

Related news

error: Content is protected !!