- Advertisement -
- Advertisement -





ಸಾಗರ: ರೈಲ್ವೆ ಗೇಟ್ನ ರೈಲ್ವೆ ಹಳಿ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎಂದು ಗುರುತಿಸಲಾಗಿದೆ.
ಬಸವರಾಜ್ ಅವರ ಬೈಕ್ ಹಾಗೂ ಮೊಬೈಲ್ ಫೋನ್ ರೈಲ್ವೆ ಹಳಿಯ ಪಕ್ಕದಲ್ಲಿ ಪತ್ತೆಯಾಗಿದೆ. ರೈಲು ಬಡಿದು ಮೃತಪಟ್ಟಿದ್ದಾರೆ ದೇಹ ಜರ್ಜರಿತವಾಗಿರುತ್ತಿತ್ತು. ಆದರೆ ಮೇಲ್ನೋಟಕ್ಕೆ ಬಸವರಾಜ್ ತಲೆಗೆ ಮಾತ್ರ ಗಾಯಗೊಂಡಂತೆ ಕಾಣಿಸುತ್ತಿದ್ದು ರೈಲು ಢಿಕ್ಕಿಯಾದ ಕುರುಹು ಗೋಚರಿಸುತ್ತಿಲ್ಲ. ಬೇರೆಲ್ಲೊ ಕೊಲೆ ಮಾಡಿ ಮೃತದೇಹ ಇಲ್ಲಿ ತಂದು ಹಾಕಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
- Advertisement -