- Advertisement -
- Advertisement -
ಜನ್ಮ ನೀಡಿದ ತಾಯಿಯನ್ನು ಮಗನೇ ಕೊಲೆಗೈದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.



ಸುಲೋಚನಮ್ಮ ತನ್ನ ಮಗನಿಂದಲೇ ಹತ್ಯೆಗೀಡಾದ ಮಹಿಳೆಯಾಗಿದ್ದು, ಪಕ್ಕದ ಮನೆಯವರು ಸುಲೋಚನಮ್ಮನವರಿಗೆ ಊಟ ಕೊಡಲೆಂದು ಬಂದಾಗ ಕೊಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಸುಲೋಚನಮ್ಮ ರವರ ಮಗ ಸಂತೋಷ್ ಕೊಲೆಗೈದ ಆರೋಪಿಯಾಗಿದ್ದು, ತಾಯಿಯನ್ನು ಹತ್ಯೆ ಮಾಡಿದ ಬಳಿಕ ಜಮೀನಿನಲ್ಲಿ ಮಲಗಿದ್ದ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
- Advertisement -