- Advertisement -
- Advertisement -
ಕುಂದಾಪುರ : ಕಾಲೇಜಿಗೆ ಕೆಲಸಕ್ಕೆಂದು ಹೋದ ಯುವಕ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವ ಘಟನೆ ಕುಂದಾಪುರದ ಮಂದಾಡಿ ಗ್ರಾಮದಲ್ಲಿ ನಡೆದಿದೆ
ಕುಂದಾಪುರದ ಮಂದಾಡಿ ಗ್ರಾಮದ ಶೋಭಾ ಎಂಬವರ ಮಗ ಸುಶಾನ್ (20) ನಾಪತ್ತೆಯಾಗಿರುವವರು.
ಹೊಂಬಾಡಿ-ಮಂಡಾಡಿ ಗ್ರಾಮದ ಹುಣ್ಣೆಮಕ್ಕಿ ಸುಣ್ಣಾರಿಯಲ್ಲಿರುವ ಕಾಲೇಜಿನಲ್ಲಿ ವಾರ್ಡನ್ ಕೆಲಸ ಮಾಡಿಕೊಂಡಿದ್ದ ಸುಶಾನ್ ಏ.27 ರಂದು ಕೆಲಸ ಮುಗಿಸಿ ಮನೆಗೆ ಬಂದು ಸ್ನಾನ ಮಾಡಿ ಕಾಲೇಜಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು. ಮರುದಿನ ಬೆಳಿಗ್ಗೆ ಸುಶಾನ್ ಅವರ ತಾಯಿ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಬಂದಿರುತ್ತದೆ. ಈ ವೇಳೆ ತಾಯಿ ಕಾಲೇಜಿಗೆ ಹೋಗಿ ವಿಚಾರಿಸಿದ್ದಲ್ಲಿ ಸುಶಾನ್ ಅವರು ಬೆಳಿಗ್ಗೆ ಕೆಲಸ ಮುಗಿಸಿ ಹೋದವನು ವಾಪಾಸು ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -