- Advertisement -
- Advertisement -


ಕೊಲ್ಲೂರು: ಹಾಲ್ಕಲ್ನ ಆನೆಝರಿ ಎನ್ನುವಲ್ಲಿ ಕಾಂತಾರ-1 ಚಿತ್ರ ತಂಡದ ಮಿನಿ ಬಸ್ ಗೆ ಸ್ಕೂಟರ್ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸುವ ಭರದಲ್ಲಿ ವಾಹನ ರಸ್ತೆ ಪಕ್ಕಕ್ಕೆ ಸರಿದ ಘಟನೆ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಸಂಭವಿಸಿದೆ.
ವಾಹನದಲ್ಲಿ ಕಾಂತಾರ-1 ಚಿತ್ರ ತಂಡದ ತಾಂತ್ರಿಕ ವಿಭಾಗದವರು ಮತ್ತು ಸಹಕಲಾವಿದರು ಇದ್ದರು.ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ಠಾಣೆಯಲ್ಲಿ ದಾಖಲಾಗಿಲ್ಲ. ಮಿನಿಬಸ್ ಚಾಲಕನ ನಿರ್ಲಕ್ಷ್ಯ ಆರೋಪಿಸಿ ಚಾಲಕ ಮತ್ತು ಅದರಲ್ಲಿದ್ದ ಸಹ ಕಲಾವಿದರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದುಬಂದಿದೆ.
- Advertisement -