Saturday, June 28, 2025
spot_imgspot_img
spot_imgspot_img

ಪಡುಬಿದ್ರಿ: ಶಾಲಾ ಆವರಣದೊಳಗೆ ಬಾಲಕನಿಗೆ ರಿಕ್ಷಾ ಡಿಕ್ಕಿ : ಬಾಲಕ ಗಂಭೀರ

- Advertisement -
- Advertisement -

ಪಡುಬಿದ್ರಿ: ಖಾಸಗಿ ಶಾಲಾ ಆವರಣದೊಳಗೆ ರಿಕ್ಷಾವೊಂದು ಪ್ರವೇಶಿಸಿ ಶಾಲಾ ಬಾಲಕನಿಗೆ ಡಿಕ್ಕಿಯಾಗಿ ಬಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಎರ್ಮಾಳು ಬಡಾ ನಿವಾಸಿ ಭವಿನ್ ಶೆಟ್ಟಿ(7) ಗಾಯಗೊಂಡ ಬಾಲಕ.

ಶಾಲೆ ಬಿಡುವ ವೇಳೆ ಶಾಲಾ ಆವರಣದೊಳಗೆ ಬಾಲಕನಿಗೆ ರಿಕ್ಷಾ ಡಿಕ್ಕಿ ಹೊಡೆದಿದ್ದು, ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಆತನನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ,ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿರುವ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯತನದ ಚಾಲನೆಗಾಗಿ ರಿಕ್ಷಾ ಚಾಲಕ ಸದಾನಂದ ದೇವಾಡಿಗ ಎಂಬಾತನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!