Saturday, June 28, 2025
spot_imgspot_img
spot_imgspot_img

ವಿಟ್ಲ: ಕೋರ್ಟ್ ಆದೇಶದ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರುದಾರರಿಗೆ ಬೆದರಿಕೆಯೊಡ್ಡಿದ ಆರೋಪಿ ಸೇಸಪ್ಪ ಬೆದ್ರಕಾಡು; ಅಫಿಡವಿಟ್‌‌ ಸಲ್ಲಿಕೆ

- Advertisement -
- Advertisement -

ವಿಟ್ಲ: ದೈವನರ್ತಕಗೆ ಬೆದರಿಸಿ, ಹಣಸುಲಿಗೆ ಮತ್ತು ಚೆಕ್‌ ವಸೂಲಿ ಮಾಡಿದ ಆರೋಪದಲ್ಲಿ ದಲಿತ ಸಂಘದ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲದ ನೆಕ್ಕರೆಕಾಡು ಎಂಬಲ್ಲಿರುವ ಕಮಲ ಎಂಬವರ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಬಂಟ್ವಾಳ ಎಡಿಷನಲ್‌ ಸಿವಿಲ್‌ ಜಡ್ಜ್‌ ಮತ್ತು JMFC ಕೋರ್ಟ್‌ ಆದೇಶ ನೀಡಿದೆ. ಆನಂದ ಸುರುಳಿಮೂಲೆ ಎಂಬವರು ಬಂಟ್ವಾಳ ಎಡಿಷನಲ್‌ ಸಿವಿಲ್‌ ಜಡ್ಜ್‌ ಮತ್ತು JMFC ಕೋರ್ಟ್‌‌ನಲ್ಲಿ ನ್ಯಾಯವಾದಿ ಶಿವಾನಂದ ವಿಟ್ಲರವರ ಮೂಲಕ ಪ್ರೈವೇಟ್‌ ಕೇಸ್‌ ದಾಖಲಿಸಿದ್ದರು. ಈ ಪ್ರಕರಣದ ವಾದ ವಿವಾದಗಳನ್ನು ಪರಿಶೀಲಿಸಿದ ಮಾನ್ಯ ನಾಯಾಲಯವು ಬಿಎನ್‌ಎಸ್‌ಎಸ್‌ನ ಸೆಕ್ಷನ್ 175(3) ಅಡಿಯಲ್ಲಿ ಸೇಸಪ್ಪ ಬೆದ್ರಕಾಡು ಮತ್ತು ಕಮಲ ನೆಕ್ಕೆರೆಕಾಡು ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದಿನಾಂಕ 19/02/2025ಪೊಲೀಸ್‌ ಇಲಾಖೆಗೆ ಆದೇಶ ನೀಡಲಾಗಿತ್ತು.

ಆದೇಶದ ಬಳಿಕ ದಿನಾಂಕ 20/2/2025 ರಂದು ಠಾಣೆಗೆ ಹಾಜರಾಗುವಂತೆ ಕರೆ ಮಾಡಿ ತಿಳಿಸಿದ್ದರು. ಆ ದಿನ 11.00 ಗಂಟೆ ಸಮಯಕ್ಕೆ ಆನಂದರವರು ವಿಟ್ಲ ಪೊಲೀಸ್‌ ಠಾಣೆಗೆ ಹಾಜರಾಗಿದ್ದು, ಈ ಸಂದರ್ಭದಲ್ಲಿ ಆರೋಪಿಗಳಾದ ಸೇಸಪ್ಪ ಬೆದ್ರಕಾಡು ಮತ್ತು ಕಮಲ ಎಂಬ ಇಬ್ಬರು ಠಾಣೆಗೆ ಹಾಜರಾಗಿದ್ದರು. ಈ ವೇಳೆ ಒಂದನೇ ಅರೋಪಿಯಾದ ಸೇಸಪ್ಪ ಬೆದ್ರಕಾಡು ಠಾಣೆ ಹೊರಗಡೆ ಬಂದು ನನ್ನ ಬಳಿ ” ನಮ್ಮ ಮೇಲೆ ನೀಡಿದ ದೂರನ್ನು ಹಿಂಪಡೆಯಬೇಕು ಇಲ್ಲದಿದ್ದರೆ 2ನೇ ಆರೋಪಿ ಕಮಲಾರವರ ಮುಖಾಂತರ ಅತ್ಯಾಚಾರದ ದೂರನ್ನು ದಾಖಲಿಸುತ್ತೇನೆ. ಮತ್ತು ನಿನ್ನಿಂದ ಪಡೆದ ಇನ್ನುಳಿದ 4 ಚೆಕ್‌ಗಳನ್ನು 25,000/-ಕ್ಕೆ ಒಂದು ಸೊನ್ನೆ ಭರ್ತಿ ಮಾಡಿ 2,50,000/-ದಂತೆ ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದು, ಅಲ್ಲದೆ ನಾನು ದಲಿತ ಸಂಘದ ಅಧ್ಯಕ್ಷ ಎಚ್ಚರಿಕೆ ಇರಲಿ ಎಂದು ಹೇಳಿ ನ್ನ ಕಛೇರಿಯಲ್ಲೇ ನಿನ್ನ ಮೇಲೆ ಅತ್ಯಾಚಾರದ ದೂರನ್ನು ತಯಾರಿಸಿಕೊಂಡು ಬರುತ್ತೇನೆ ಎಂದು ಅಲ್ಲಿಂದ ತೆರಳಿದ್ದಾರೆ. 1ನೇ ಮತ್ತು 2ನೇ ಆರೋಪಿಗಳು ಠಾಣೆಯಲ್ಲಿ ಹಾಜಾರಾಗಿದ್ದ ಸಾಕ್ಷಿ ಠಾಣೆಯ ಸಿ.ಸಿ ಕ್ಯಾಮಾರದಲ್ಲಿ ದಾಖಲಾಗಿರುತ್ತದೆ. ಈ ಬಗ್ಗೆ ನಾನು ಠಾಣಾಧಿಕಾರಿಗೆ ಮೌಖಿಕ ದೂರನ್ನು ಕೊಟ್ಟಾಗ ಠಾಣಾಧಿಕಾರಿಯವರು ನನ್ನಲ್ಲಿ ಅವರು ಅತ್ಯಾಚಾರದ ದೂರನ್ನು ಕೊಟ್ಟರೆ ಸ್ವೀಕರಿಸಬೇಕಾಗುತ್ತದೆ ಎಂದು ಹಾರಿಕೆಯ ಉತ್ತರವನ್ನು ನೀಡಿರುತ್ತಾರೆ” ಎಂದು ಮಾನ್ಯ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಮ್‌‌ಎಫ್‌.ಸಿ ನ್ಯಾಯಾಲಯಕ್ಕೆ ಅಫಿಡವಿಟ್‌‌ ಸಲ್ಲಿಸಿದ್ದಾರೆ. ಆನಂದ ಸುರುಳಿಮೂಲೆ ಪರವಾಗಿ ವಕೀಲರಾದ ಶಿವಾನಂದ ವಿಟ್ಲ ವಾದಿಸಿದರು.

- Advertisement -

Related news

error: Content is protected !!