


ವಿಟ್ಲ: ಬಿಸಿನೆಸ್ ನಲ್ಲಿ ಲಾಭ ನೀಡುತ್ತೇನೆ ಎಂದು ಅಮಾಯಕ ಯುವಕನನ್ನು ನಂಬಿಸಿ ಆತನಿಂತ ಲಕ್ಷಾಂತರ ರೂ. ಪಡೆದು ವಂಚಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಸಾಲೆತ್ತೂರು ನಿವಾಸಿ ಆಸೀಫ್ ಎಂಬಾತನಿಗೆ ಈ ಹಿಂದೆ ವಿದೇಶದಲ್ಲಿದ್ದ ವೇಳೆ ವಿದ್ಯಾನಗರ ಮುಡಿಪು ನಿವಾಸಿ ಸಿದ್ದೀಕ್ ಎಂಬಾತನ ಪರಿಚಯವಾಗಿದ್ದು, ಬಳಿಕ ಆತನ ಜತೆ ಆತ್ಮೀಯತೆಯಿಂದ ಒಡನಾಟ ಇಟ್ಟುಕೊಂಡಿದ್ದನು.
ಆಸೀಫ್ ವಿದೇಶದಿಂದ ಊರಿಗೆ ಬಂದಿದ್ದ ಸಮಯದಲ್ಲಿ ಅಸಾಮಿ ಸಿದ್ದೀಕ್ ವಿದ್ಯಾನಗರ ಕೂಡ ಊರಿಗೆ ಬಂದು, ಆಸೀಪ್ ನನ್ನು ಸಂಪರ್ಕ ಮಾಡಿದ್ದಾನೆ. ಆಸೀಪ್ ನಲ್ಲಿ ಬಿಸಿನೆಸ್ ಮಾಡುವ ಎಂದು ಹೇಳಿ ವಿವಿಧ ದಿನಗಳಲ್ಲಿ ಒಟ್ಟು 2.50 ಲಕ್ಷ ರೂ. ವರೆಗೆ ಹಣ ಪಡೆದಿದ್ದನು.
ನಿನ್ನಿಂದ ಪಡೆದ ಹಣವನ್ನು ಬಿಸಿನೆಸ್ ಗೆ ಹಾಕಿದ್ದು, ನಿನಗೆ ತಿಂಗಳು ತಿಂಗಳು ಲಾಭ ನೀಡುತ್ತೇನೆ ಎಂದು ನಂಬಿಸಿ, ದಿನಕಳೆದಂತೆ ಲಾಭ ಬಿಟ್ಟು, ಕೊಟ್ಟ ಹಣವನ್ನು ಕೇಳಿದಾಗ ಒಂದೊಂದು ಮಾತು ಹೇಳಿ ತಪ್ಪಿಸಿಕೊಂಡಿದ್ದಾನೆ. ಇದೀಗ ಸಿದ್ದೀಕ್ ನಾಪತ್ತೆಯಾಗಿದ್ದು ಅಸೀಪ್ ನ ಕರೆ ಮತ್ತು ಮೆಸೇಜ್ ಬಾರದಂತೆ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದು, . ಇದೀಗ ಆಸಾಮಿ ಊರಿನಿಂದಲೇ ಭೂಗತನಾಗಿರುತ್ತಾನೆ ಎಂದು ಆಸೀಫ್ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.
ಈತ ಊರಿನಲ್ಲಿ ಇದೇ ರೀತಿಯಾಗಿ ಹಲವು ಮಂದಿಗೆ ವಂಚಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.