Saturday, June 28, 2025
spot_imgspot_img
spot_imgspot_img

ಕಡವೆ ಬೇಟೆಯಾಡಿದ ಆರೋಪ; ನಾಲ್ವರು ಆರೋಪಿಗಳು ಪೊಲೀಸ್‌ ‌ವಶ..!

- Advertisement -
- Advertisement -

ಶಿವಮೊಗ್ಗ: ಕಡವೆಯನ್ನು ಬೇಟೆಯಾಡಿದ ಅರೋಪದಲ್ಲಿ ನಾಲ್ವರನ್ನು ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಭದ್ರಾವತಿ ತಾಲೂಕಿನ ಗೋಂದಿ ಗ್ರಾಮದ ನಿವಾಸಿ ಶಿವ ಬಿನ್ ರಾಜಪ್ಪ(28), ವೆಂಕಟೇಶ ಬಿನ್ ಮುನಿಯಪ್ಪ (60), ಚಿಕ್ಕಮಗಳೂರು ಚೌಡಿಕಟ್ಟೆ ಭೈರಾಪುರ ಗ್ರಾಮ ವಾಸಿಗಳಾದ ಮಂಜಪ್ಪ ಬಿನ್ ನಾಗಪ್ಪ (45), ವಿನೋದ ಬಿನ್ ಮಂಜಪ್ಪ (19) ಎಂದು ಗುರುತಿಸಲಾಗಿದೆ.

ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್‌ನ ಚೌಡಿಕಟ್ಟೆಯ ಬಳಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿದ ಆರೋಪಿಗಳು, ಅದರ ತಲೆಯನ್ನು ಕೆರೆಗೆ ಎಸೆದು ಹೋಗಿದ್ದರು ಎನ್ನಲಾಗಿದೆ. ಈ ಪ್ರಕರಣವನ್ನು ಭೇದಿಸಿದ ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಈ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಭದ್ರಾವತಿ ಡಿಸಿಎಫ್ ಆಶೀಶ್ ರೆಡ್ಡಿಚನ್ನಗಿರಿ ಎಸಿಎಫ್ ರತ್ನಪ್ರಭ ಮಾರ್ಗದರ್ಶನದಲ್ಲಿ ಉಂಬ್ರೇಬೈಲು ಆರ್ ಎಫ್ ಓ ಗಿಡ್ಡಸ್ವಾಮಿ, ಡಿಆರ್ ಎಫ್ ಓ ಪವನ್, ಬೀಟ್ ಫಾರೆಸ್ಟ್ ಸಂಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement -

Related news

error: Content is protected !!