Monday, June 30, 2025
spot_imgspot_img
spot_imgspot_img

ಸಂಕಷ್ಟದಲ್ಲಿ ಸಿಲುಕಿದ ನಟ ದರ್ಶನ್‌ನನ್ನು ಮರೆತುಬಿಟ್ರಾ ನಟ ಯಶ್‌.. !

- Advertisement -
- Advertisement -

ಯಶ್‌ ಎಲ್ಲಿದಿಯಪ್ಪಾ..?

ರಾಜ್ಯವನ್ನೇ ಬೆಚ್ಚಿ ಬೀಳಿಸದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ನಟ ದರ್ಶನ್ ನೊಂದಿಗೆ ಪ್ರತೀ ಕಾರ್ಯಕ್ರಮಗಳಲ್ಲಿ ಹಾಗೂ ಪ್ರತೀ ಹೆಜ್ಜೆಯಲ್ಲೂ ಸಾಥ್‌ ನೀಡುತ್ತಿದ್ದ ಜೋಡೆತ್ತುಗಳಲ್ಲಿ ಒಂದಾದ ನಟ ಯಶ್‌ ಮಾಯವಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿ ದಿನ ಕಳೆಯುತ್ತಿದ್ದಾರೆ. ಈ ಬಗ್ಗೆ ಚಿತ್ರರಂಗದ ಹಲವು ನಟ ನಟಿಯರು ಪ್ರತಿಕ್ರಿಯಿಸಿದ್ದಾರೆ. ದರ್ಶನ್‌ ಅಭಿಮಾನಿ ಬಳಗ ರಾಜ್ಯಾದ್ಯಂತ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಇದ್ರೂ ದರ್ಶನ್‌ ಆಪ್ತ ನಟ ಯಶ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ರಾಜ್ಯದ ಜನತೆಯಲ್ಲಿ ಪ್ರಶ್ನೆಯಾಗಿ ಉಳಿದಿದೆ.

ಸುಮಲತಾ ಅಂಬರೀಶ್‌ ರವರ ಸುಪುತ್ರ ಅಭಿಷೇಕ್‌ ಅಂಬರೀಶ್‌ ಅವರ ಮದುವೆಯ ಸಂದರ್ಭದಲ್ಲಿ ನಟ ಯಶ್‌ ಹಾಗೂ ದರ್ಶನ್‌ ಜೊತೆಯಾಗಿ ಕುಣಿದು ಕುಪ್ಪಳಿಸಿದ ವೀಡಿಯೋಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೋಡೆತ್ತುಗಳಂತೆ ನಟ ಯಶ್‌ ಮತ್ತು ದರ್ಶನ್‌ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಅದಲ್ಲದೇ ವಿಧಾನ ಸಭೆಯ ಚುನಾವಣೆಯ ವೇಳೆ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರವಾಗಿ ಪ್ರಚಾರಿಕ್ಕಿಳಿದವರು ಇದೇ ದರ್ಶನ್‌ ಮತ್ತು ಯಶ್‌ ಎಂಬ ಜೋಡೆತ್ತುಗಳು.

ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರವರ ಪಾತ್ರ ಪ್ರಮುಖವಾಗಿದೆ ಎಂಬ ಹಲವು ಸಾಕ್ಷ್ಯಗಳು ದರ್ಶನ್‌ ಆರೋಪಿ ಎಂದು ಉಲ್ಲೇಖಿಸುತ್ತಿದೆ. ಈ ಬಗ್ಗೆ ಸಿನಿ ಪ್ರಿಯರು ಸೇರಿದಂತೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಾ ಇದ್ರೂ ನಟ ಯಶ್‌ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಒಂದೆಡೆ ದರ್ಶನ್‌ ನ ಪಾಡು ನೋಡಲಾರದೆ ಅಭಿಮಾನಿಗಳು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸ್ತಾ ಇದ್ರೆ ಇನ್ನೊಂದೆಡೆ ದರ್ಶನ್‌ ಎಸಗಿದ ನೀಚ ಕೃತ್ಯದ ಬಗ್ಗೆ ತಕ್ಕ ಶಿಕ್ಷೆಯಾಗಬೇಕೆನ್ನುವ ಕಿಚ್ಚು ಹೊತ್ತಿ ಉರಿಯುತ್ತಿದೆ. ಇಷ್ಟೆಲ್ಲಾ ರಂಪಾಟ ನಡೀತಾ ಇದ್ರು ನಟ ಯಶ್‌ ಮಾತ್ರ ಎಲ್ಲೂ ಕಾಣ್ತಾ ಇಲ್ಲ.. ಯಾವುದೇ ಪ್ರತಿಕ್ರಿಯೆ ಇಲ್ಲ.. ಯಶ್‌ ಎಲ್ಲಿದಿಯಪ್ಪಾ..? ನಿನ್ನ ಜೋಡೆತ್ತು ಸಂಕಷ್ಟದಲ್ಲಿ ಸಿಲುಕಿದ್ರೂ.. ಯಾಕೆ ಈ ಮೌನ..? ಎನ್ನುವ ಹಲವಾರು ಪ್ರಶ್ನೆಗಳು ಜನರಲ್ಲಿ ಕಾಡತೊಡಗಿದೆ.

- Advertisement -

Related news

error: Content is protected !!