ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಇವರಿಂದ ಬಿ.ಸಿ. ಟ್ರಸ್ಟ್ ವಿಟ್ಲ, ವಿಟ್ಲ ವಲಯದ ಅಳಿಕೆ ಒಕ್ಕೂಟದ ಸಹಭಾಗಿತ್ವದಲ್ಲಿ ದಿನಾಂಕ 17.09.2020 ಗುರುವಾರದಂದು ಅಳಿಕೆ ಪಂಚಾಯತ್ ಸಭಾಭವನದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಾವಣೆ ಮತ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷರಾದ ಯಶೋಧರ ಬಂಗೇರ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ದೇವಸ್ಥಾನ ತಾರೆಬ್ಬಾರು ನಿಕ್ಕಿತ್ತಪುಣಿ್ ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ವಲಯ ಮೇಲ್ವಿಚಾರಕರಾದ ರಮೇಶ್ ಯಸ್ ರವರು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಶ್ರೀ ಸತ್ಯ ಸಾಯಿ ಲೋಕ ಟ್ರಸ್ಟ್ ಸಂಸ್ಥೆಯ ಸಂಚಾಲಕರಾದ ಜನಾರ್ಧನ ನಾಯಕ್ ಮತ್ತು ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.ಸದಾಶಿವ ಶೆಟ್ಟಿ ನಿರೂಪಿಸಿ ಪ್ರಾರ್ಥನೆಯನ್ನು ಒಕ್ಕೂಟದ ಕೋಶಾಧಿಕಾರಿ ಶ್ರೀಮತಿ ಅಮಿತಾ,ಸ್ವಾಗತವನ್ನು ಶ್ರೀಮತಿ ಲೀಲಾವತಿ ಮತ್ತು ಅಳಿಕೆ ಒಕ್ಕೂಟದ ಸೇವಾ ಪ್ರತಿನಿಧಿ ನಿತ್ಯಾನಂದರವರು ವಂದಿಸಿದರು. ಒಟ್ಟು 230 ಸದಸ್ಯರು ನೊಂದಾವಣೆಯಾಗಿದ್ದು 200 ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.