- Advertisement -
- Advertisement -
ವಿಟ್ಲ: ಬಿಜೆಪಿ ಶಕ್ತಿಕೇಂದ್ರ ಅಳಿಕೆ ಇದರ ವತಿಯಿಂದ ಲೋಕಸೇವಾ ಟ್ರಸ್ಟಿನ ಅಧ್ಯಕ್ಷರಾಗಿದ್ದ ಯು. ಗಂಗಾಧರ ಭಟ್ಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಚೆಂಡುಕಳ ಯುವಕ ಮಂಡಲದಲ್ಲಿ ನಿನ್ನೆ ಸಂಜೆ ನಡೆಯಿತು. ಕಾರ್ಯಕ್ರಮದಲ್ಲಿ ಸತ್ಯ ಸಾಯಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀಧರ್ ಅವರು ಭಾಗವಹಿಸಿದ್ದರು.
ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಶೆಟ್ಟಿ ಎರಂಬು, ಅಳಿಕೆ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಕಾನ ಈಶ್ವರ ಭಟ್ ಬೂತ್ ಅಧ್ಯಕ್ಷರಾದ ಕುಶಾಲಪ್ಪ ಕಾರ್ಯದರ್ಶಿಗಳಾದ ಮಹೇಶ ದೂಜಮೂಲೆ, ವಸಂತ ಎರಂಬು ಯುವಕ ಮಂಡಲದ ಅಧ್ಯಕ್ಷರಾದ ರೂಪೇಶ್ ರೈ ಅಳಿಕೆ ಗುತ್ತು, ಹಿರಿಯ ಮುಂದಾಳು ಅಣ್ಣು ಕುಲಾಲ್ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
- Advertisement -