Friday, June 27, 2025
spot_imgspot_img
spot_imgspot_img

ಸಾಕು ಪ್ರಾಣಿಗಳ ಆಹಾರದ ತಯಾರಿಕಾ ಘಟಕದಲ್ಲಿ ಹಸುಗಳ ಮಾಂಸ ಬಳಕೆ ಆರೋಪ; ಪೊಲೀಸ್‌ ದಾಳಿ-ಕರುವಿನ ತಲೆ ಪತ್ತೆ

- Advertisement -
- Advertisement -
vtv vitla

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಹಸುಗಳ ಮಾಂಸ ಬಳಕೆಯಾಗುತ್ತಿದೆ ಎಂಬ ಆರೋಪದ ಮೇಲೆ ತುಂಗಾನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಕಮಲೇಶ್ ಎಂಬವರಿಗೆ ಸೇರಿದ ಮಲ್ನಾಡ್ ಪ್ರೋ ರಿಚ್ ಎಂಬ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ.

ಈ ಕಾರ್ಖಾನೆಯಲ್ಲಿ ಪಾಲಿಕೆ ವ್ಯಾಪ್ತಿಯಿಂದ ಬರುವ ಕೋಳಿಯ ತ್ಯಾಜ್ಯ ಸಂಗ್ರಹಿಸಿ ಸಾಕು ಪ್ರಾಣಿಗಳಿಗೆ ಆಹಾರದ ಪ್ಯಾಕೇಟ್ ಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಗುರುವಾರ ದಾಳಿ ವೇಳೆ ಕಾರ್ಖಾನೆಯಲ್ಲಿ ಕರುವಿನ ತಲೆಯು ಪತ್ತೆಯಾಗಿದೆ. ಹೀಗಾಗಿ ಈ ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಹಸುಗಳ ಮಾಂಸವನ್ನು ಬಳಸಲಾಗುತ್ತಿದೆ ಎಂಬ ಅನುಮಾನ ಪೊಲೀಸರದ್ದಾಗಿದೆ.

ಹೀಗಾಗಿ ದಾಳಿ ನಡೆಸಿರುವ ಪೊಲೀಸರು ಒಂದು ಕಾರಿ 12 ಫೀಡಿಂಗ್ ಪುಡ್ ಚೀಲಗಳನ್ನು ವಶಪಡಿಸಿಕೊಂಡು, ಆರೋಪಿ ಕಮಲೇಶ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!