ಅನಂತಾಡಿ: ಅನಂತಾಡಿ ಯುವಕ ಮಂಡಲ 567 (ರಿ) ಅನಂತಾಡಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇದರ ಸಹಯೋಗದೋಂದಿಗೆ ಕ್ರೀಡೋತ್ಸವ-2024 ಎ.20 ನೇ ಶನಿವಾರ ಚಿತ್ತರಿಗೆ ಕ್ರೀಡಾಂಗಣ ಅನಂತಾಡಿ ಇಲ್ಲಿ ನಡೆಯಲಿದೆ.
ದಿನಾಂಕ: 20-04-2024 ನೇ ಶನಿವಾರ ರಾತ್ರಿ ಗಂಟೆ 8:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಉಳ್ಳಾಲ್ತಿ ದೇವಸ್ಥಾನ ಅನಂತಾಡಿ ಕೊಬ್ರಿಮಠ ಅರ್ಚಕರು ಶ್ರೀ ಕಾಂತ ಬನ್ನಿಂತಾಯರು, ಶ್ರೀ ಉಳ್ಳಾಲ್ತಿ ದೇವಸ್ಥಾನ ಅನಂತಾಡಿ ಆಡಳಿತ ಮುಕ್ತೇಸರರು ನರೇಂದ್ರ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಹಗ್ಗಜಗ್ಗಾಟದ ಉದ್ಘಾಟಕರ ನಿವೃತ್ತ ಸರ್ವೇ ಅಧಿಕಾರಿ ಸಂಜೀವ ಪೂಜಾರಿ, ಹಿರ್ತಂದ ಬೈಲು, ವಾಲಿಬಾಲ್ ಅಂಕಣದ ಉದ್ಘಾಟಕ ನಾಟಿ ವೈದ್ಯಾಲಯ ಗೋಳಿಕಟ್ಟೆ ಅನಂತಾಡಿ ಗಂಗಾಧರ ಪಂಡಿತ್ ಭಾಗವಹಿಸಲಿದ್ದಾರೆ. ಹಜಾಜ್ ಗ್ರೂಪ್ ಗೊಳ್ತಮಜಲು ರೋಟರಿಯನ್ ಹಾಜಿ ಅಹ್ಮದ್ ಮುಸ್ತಫ, ನಿವೃತ್ತ ದೈಹಿಕ ಶಿಕ್ಷಕ ಲಯನ್ಸ್ ಗಂಗಾಧರ ರೈ ತುಂಗರೆಕೋಡಿ, ಉದ್ಯಮಿ ವಿಟ್ಲ ಸತೀಶ್ ಕಲ್ಲೇಗ ಅಧ್ಯಕ್ಷ ಯುವವಾಹಿನಿ(ರಿ) ಮಾಣಿ ಘಟಕ ನಾಗೇಶ್ ಕೊಂಕಣಪದವು, ನಿವೃತ್ತ ಪ್ರಬಂಧಕರು ಸಿಎ ಬ್ಯಾಂಕ್, ನೇರಳಕಟ್ಟೆ ಸಂಜೀವ ಪೂಜಾರಿ ಇಡೆಮುಂಡೇವು, ಉದ್ಯಮಿ ಎಸ್.ಇ ರೋಡ್ ಲೈನ್ಸ್ ಇಬ್ರಾಹಿಂ ಬಾತಿಶಾ, ಹಿಂದೂ ಯುವಸೇನೆ ವಿಟ್ಲ ಕರುಣಾಕರ ನೈತೊಟ್ಟು, ಮುಖ್ಯ ಆರಕ್ಷಕರು, ಆಂತರಿಕ ಭದ್ರತಾ ವಿಭಾಗ ಬಂಟ್ವಾಳ ದ.ಕ ಜಿಲ್ಲಾ ದರ್ಣಪ್ಪ ಗೌಡ ಕರಿಂಕ, ಪ್ರಗತಿಪರ ಕೃಷಿಕರು ನಾರಾಯಣ ಗೌಡ, ಹಿರ್ತಂದ ಬೈಲು ಮುಖ್ಯ ಅತಿಥಿ ಗಣ್ಯರಾಗಿ ಭಾಗವಹಿಸಲಿದ್ದಾರೆ.
ದಿನಾಂಕ: 21-04-2024 ನೇ ಆದಿತ್ಯವಾರ ಬೆಳಿಗ್ಗೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಗೋಳಿಕಟ್ಟೆ ಅರವಿಂದ ಕೊಂಡೆ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರು ಅನಂತಾಡಿ ರಮೇಶ್ ಮಠದ ಮೂಲೆ, ಅಧ್ಯಕ್ಷರು ಹಿಂದೂ ಧಾರ್ಮಿಕ ಸೇವಾ ಸಮಿತಿ ಅನಂತಾಡಿ ಶೀತಲ್ ಶೆಟ್ಟಿ, ಉದ್ಯಮಿ ಯಾಸೀರ್ ಮಾಣಿ, ಪ್ರಗತಿಪರ ಕೃಷಿಕರು ಸೋಮಶೇಖರ ಕೋಂಗಲಾಯಿ,, ಆಡಿಟರ್ &ಟ್ಯಾಕ್ಸ್ ಪ್ರಾಕ್ಟೀಷ್ನರ್ ಮಂಗಳೂರುಬ ಶಿವರಾಮ್ ಪಿ. ಆರ್ ಅನಂತಾಡಿ,ನ್ಯಾಷನಲ್ ಇನ್ಸೂರೆನ್ಸ್ ಕಂಪೆನನಿ.ಲಿ. ಪುತ್ತೂರು ಕೃಷ್ಣಪ್ಪ ಗೌಡ ಕರಿಂಕ ಮುಖ್ಯ ಅತಿಥಿ ಗಣ್ಯರಾಗಿ ಭಾಗವಹಿಸಲಿದ್ದಾರೆ.