Friday, June 27, 2025
spot_imgspot_img
spot_imgspot_img

ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆಂಕಿ; ವಿಗ್ರಹಗಳಿಗೆ ಹಾನಿ

- Advertisement -
- Advertisement -

ಢಾಕಾ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವ ವರದಿಗಳ ನಡುವೆ, ಢಾಕಾದ ಹೊರವಲಯದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಢಾಕಾದ ಉತ್ತರದಲ್ಲಿರುವ ಧೋರ್ ಗ್ರಾಮದಲ್ಲಿರುವ ಮಹಾಭಾಗ್ಯ ಲಕ್ಷ್ಮೀನಾರಾಯಣ ಮಂದಿರದ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆದಿದೆ.

ದುಷ್ಕರ್ಮಿಗಳು ವಿಗ್ರಹಗಳನ್ನು ಗುರಿಯಾಗಿಸಿಕೊಂಡು ಹಾನಿಯನ್ನುಂಟುಮಾಡಿದ್ದಾರೆ ಎಂದು ಹೇಳಿದ್ದಾರೆ. ಬೆಂಕಿಯಿಂದ ಲಕ್ಷ್ಮಿ ನಾರಾಯಣನ ವಿಗ್ರಹಗಳು ಮತ್ತು ಇತರ ದೇವಾಲಯದ ವಸ್ತುಗಳು ನಾಶವಾಗಿವೆ. ಈ ದೇವಾಲಯವು ಢಾಕಾದ ತುರಾಗ್ ಪೊಲೀಸ್ ವ್ಯಾಪ್ತಿಯ ಭಾಗವಾದ ಧೋರ್ ಗ್ರಾಮದಲ್ಲಿದೆ.

ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ಅನೇಕ ವರದಿಗಳ ಹೊರತಾಗಿಯೂ, ಸ್ಥಳೀಯ ಅಧಿಕಾರಿಗಳು ಅಂತಹ ದಾಳಿಗಳನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

Related news

error: Content is protected !!