Monday, May 20, 2024
spot_imgspot_img
spot_imgspot_img

ಅಶೋಕ್ ಕುಮಾರ್‌ ರೈ ಯವರ ಸಮಾಜ ಸೇವೆ ಇಂದು ಶಾಸಕರನ್ನಾಗಿ ಆಯ್ಕೆಯಾಗಲು ಕೈ ಹಿಡಿದು ಮುನ್ನಡೆಸಿದೆ: ಕೃಷ್ಣ ಪ್ರಸಾದ್ ಬೊಳ್ಳಾವು

- Advertisement -G L Acharya panikkar
- Advertisement -
vtv vitla

ಬಡವರ ಬಂಧು, ಧಾರ್ಮಿಕ ಮುಂದಾಳು, ಸಾಮಾಜಿಕ ಕಳಕಳಿಯ ಸಮಾಜೋದ್ಧಾರಕ ಎಂದೆಲ್ಲಾ ಖ್ಯಾತಿ ಹೊಂದಿರುವ ಅಶೋಕ್ ಕುಮಾರ್ ರೈಯವರು ಸರಳ ಸಜ್ಜನಿಕೆಯ ಕೈಗನ್ನಡಿ. ಯಶಸ್ವಿ ಉದ್ಯಮಿಯಾಗಿ, ಬಡವರ, ನೊಂದವರ ಆಶಾ ಕಿರಣವಾಗಿ ಇಂದು ಪತ್ತೂರಿನ ಶಾಸಕರಾಗಿ ಆಯ್ಕೆಯಾಗಿರುವುದು ಪುತ್ತೂರಿನ ಜನರಲ್ಲಿ ಸಂತಸ ತಂದಿದೆ.

“ಬಡಕುಟುಂಬದಿಂದ ಬಂದ ಇವರು ಇನ್ನೊಬ್ಬರಿಗೆ ತಮ್ಮಿಂದಾಗುವಷ್ಟು ನೆರವಾಗಿ ಸಂತೃಪ್ತಿಯಿಂದ ಬದುಕುತ್ತಿದ್ದ ಕುಟುಂಬ ಇವರದಾಗಿತ್ತು. 2013ರಲ್ಲಿ ರೈ ಎಸ್ಟೇಟ್ ಎಜ್ಯುಕೇಷನಲ್& ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ, ಹೀಗೆ ಹಲವು ಜನರಿಗೆ ನೆರವಾಗಿ ಎಲ್ಲರ ಮನಸಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಜೊತೆಗೆ ಸಾವಿರಾರು ಸಂಖ್ಯೆಯ ಜನರಿಗೆ ವಸ್ತ್ರದಾನ, ಜೊತೆಗೆ ಆರ್ಥಿಕ ಸಹಾಯ ನೀಡುತ್ತಿದ್ದರು. ಅಲ್ಲದೆ ಅದೆಷ್ಟೋ ಬಡವರಿಗೆ ತನ್ನ ಸ್ವಂತ ಹಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಕಾರ್ಡ್ ಸೇರಿದಂತೆ ಇನ್ನಿತರ ಸರಕಾರಿ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದಾರೆ.

ಇದರೊಂದಿಗೆ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿಗಳ ಅಧ್ಯಕ್ಷರಾಗಿದ್ದುಕೊಂಡು ಯಶಸ್ವಿಯಾಗಿ ದೇವಾಲಯಗಳ ಬ್ರಹ್ಮಕಲಶೋತ್ಸವಗಳನ್ನು ನಡೆಸಿಕೊಟ್ಟಿದ್ದಾರೆ. ಈ ಎಲ್ಲಾ ಸಮಾಜ ಸೇವೆ ಇಂದು ಇವರನ್ನು ಶಾಸಕರನ್ನಾಗಿ ಆಯ್ಕೆಮಾಡಲು ಕೈ ಹಿಡಿದು ಮುನ್ನಡೆಸಿದೆ. ಒಬ್ಬ ಉದ್ಯಮಿಯಾಗಿ ಸಾವಿರಾರು ಬಡವರ ಪಾಲಿಗೆ ನೆರವಾಗಿರುವುದು ಇಂದು ಎಲ್ಲಾ ಜನರಲ್ಲಿ ವಿಶ್ವಾಸ ಮೂಡಿಸಿದೆ. ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುವ ಶಾಸಕರು ಸರಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಮನೆ-ಮನಗಳಿಗೆ ತಲುಪಿಸುವ ಕಾರ್ಯ ಮಾಡ್ತಾರೆ, ಮುಂದಿನ ದಿನಗಳಲ್ಲಿ ಪುತ್ತೂರು ಅಭಿವೃದ್ಧಿಯ ಕ್ಷೇತ್ರವಾಗಿ ಹೆಸರುವಾಸಿಯಾಗುತ್ತದೆ ಎಂಬ ನಂಬಿಕೆ ವಿಶ್ವಾಸ ಎಲ್ಲರಲ್ಲೂ ಇದೆ” ಎಂದು ಅಶೋಕ್ ಕುಮಾರ್ ರೈ ಯವರ ಆಪ್ತ ವಲಯದಲ್ಲೊಬ್ಬರಾದ ಕೃಷ್ಣ ಪ್ರಸಾದ್ ಬೊಳ್ಲಾವುರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

- Advertisement -

Related news

error: Content is protected !!