Sunday, June 29, 2025
spot_imgspot_img
spot_imgspot_img

ವೇಣೂರು: ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ನಡೆಸಿ, ಜೀವ ಬೆದರಿಕೆ : ವೇಣೂರು ಠಾಣೆಯಲ್ಲಿ ದೂರು ಪ್ರತಿದೂರು ದಾಖಲು

- Advertisement -
- Advertisement -

ವೇಣೂರು: ವ್ಯಕ್ತಿಯೋರ್ವರು ವೈನ್ ಶಾಪ್ ಬಳಿ ಮದ್ಯಪಾನ ಮಾಡಲು ಬಂದಿದ್ದಾಗ, ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಬೆಳ್ತಂಗಡಿ ತಾಲೂಕು ಮೂಡುಕೋಡಿ ಗ್ರಾಮದಲ್ಲಿ ನಡೆದಿದೆ.

ಬೆಳ್ತಂಗಡಿ,ನಿಟ್ಟಡೆ ಗ್ರಾಮ ನಿವಾಸಿ ಪ್ರಸಾದ್‌ @ ಬಾಡು ಪ್ರಸಾದ್ ರವರು, ದಿನಾಂಕ 07.07.2024 ರಂದು ರಾತ್ರಿ , ತನ್ನ ಸ್ನೇಹಿತ ಮೋಹನ್ ನೊಂದಿಗೆ, ಬೆಳ್ತಂಗಡಿ ತಾಲೂಕು ಮೂಡುಕೋಡಿ ಗ್ರಾಮದ ವೈನ್ ಶಾಪ್ ಬಳಿ ಮದ್ಯಪಾನ ಮಾಡಲು ಬಂದಿದ್ದಾಗ, ಆರೋಪಿಗಳಾದ 1)ವಸಂತ್ ಕೋಟ್ಯಾನ್, 2) ಸಂತೋಷ್ ನಾರ್ಲ ಎಂಬವರುಗಳು, ಪ್ರಸಾದ್‌ ರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ‌. ಪಿರ್ಯಾದಿಯ ಸ್ನೇಹಿತರಾದ ಮೋಹನ್ ಮತ್ತು ಕಟ್ಟೆ ಸಂತೋಷ್ ಎಂಬವರು ಗಲಾಟೆ ಬಿಡಿಸಿದಾಗ, ಆರೋಪಿಗಳು ಪ್ರಸಾದ್‌ರಿಗೆ ಜೀವ ಬೆದರಿಕೆ ಒಡ್ಡಿ ತೆರಳಿರುತ್ತಾರೆ. ಪ್ರಸಾದ್‌ರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 57/2024, ಕಲಂ : 126(2),352,115(2),118(1),351(2),R/w 3(5)BNS-2023
ರಂತೆ ಪ್ರಕರಣ ದಾಖಲಾಗಿರುತ್ತಾರೆ.

ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಸಂತ ಕೋಟ್ಯಾನ್ ಹಾಗೂ ಸಂತೋಷ್ ರವರಿಗೆ, ಪ್ರಸಾದ್‌ @ ಬಾಡು ಪ್ರಸಾದ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 58/2024 u/s: 126(2),352,115(2),351(2), BNS-2023 ರಂತೆ‌ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!