- Advertisement -
- Advertisement -



ಉಪ್ಪಿನಂಗಡಿ : ಮನೆಮಂದಿ ರಾತ್ರಿ ಮಲಗಿದ್ದ ವೇಳೆ ಯಾರೋ ಕಳ್ಳರು ಕಳವಿಗೆ ಯತ್ನಿಸಿ, ಮನೆಯವರು ಎಚ್ಚರಗೊಂಡು ಬೊಬ್ಬೆ ಹಾಕಿದಾಗ ಕಳ್ಳರು ಓಡಿ ಪರಾರಿಯಾದ ಘಟನೆ ಪೆರಿಯಡ್ಕ ಎಂಬಲ್ಲಿ ನಡೆದಿದೆ.
ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ರೋಹಿತ್ ರವರು ದಿನಾಂಕ: 12-07-2024 ರಂದು ರಾತ್ರಿ ಎಂದಿನಂತೆ, ಊಟ ಮಾಡಿ ಮನೆಯ ಎದುರು ಹಾಲ್ ನಲ್ಲಿ ಮಲಗಿದ್ದು ಮುಂಜಾನೆ ಹೊತ್ತಲ್ಲಿ ಯಾರೋ ಕಳ್ಳರು, ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳ ಪ್ರವೇಶಿಸಿ, ಕೋಣೆಯಲ್ಲಿ ಕಳವು ಮಾಡಲು ಪ್ರಯತ್ನಿಸಿದಾಗ, ರೋಹಿತ್ ರವರ ತಾಯಿ ಎಚ್ಚರಗೊಂಡು ಬೊಬ್ಬೆ ಹಾಕಿರುತ್ತಾರೆ. ಈ ವೇಳೆ ರೋಹಿತ್ ಎದ್ದು ನೋಡಿದಾಗ, ಕಳವು ಮಾಡಲು ಪ್ರಯತ್ನಿಸುತ್ತಿದ್ದಾತ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿದ್ದಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 80/2024 ಕಲಂ: 331(4), 305, 62 BNS 2023ಚಗಿರುತ್ತದೆ.
- Advertisement -