- Advertisement -
- Advertisement -



ಕಾಸರಗೋಡು: ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ವರ್ಕಾಡಿ ಸಮೀಪದ ಕೊಡ್ಲಮೊಗರು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಮೂಲತಃ ಕೊಡ್ಲಮೊಗರು ಬಂಡಶಾಲೆಯ ನಿವಾಸಿ, ಪ್ರಸ್ತುತ ಮಂಗಳೂರು ಕೊಟ್ಟಾರದಲ್ಲಿ ವಾಸವಾಗಿರುವ ರಾಜೇಂದ್ರ ಶೆಟ್ಟಿ (54) ಎಂದು ಗುರುತಿಸಲಾಗಿದೆ.
ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ರಾಜೇಂದ್ರ ಶೆಟ್ಟಿ ಅವರು ಕೊಡ್ಲಮೊಗರುನಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಿದ್ದರು. ಇದೀಗ ಈ ಮನೆಯ ದುರಸ್ತಿ ನಡೆಯುತ್ತಿತ್ತು. ಶುಕ್ರವಾರ ಬೆಳಿಗ್ಗೆ ಮನೆಯ ಸಮೀಪದ ಬಾವಿಯ ಆವರಣ ಗೋಡೆಯಲ್ಲಿ ನಿಂತು ಮೋಟಾರ್ ಪೈಪ್ ಸರಿಪಡಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ರಾಜೇಂದ್ರ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದುರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.
- Advertisement -