- Advertisement -
- Advertisement -
ಸುಳ್ಯ ಗಾಂಧಿನಗರದಲ್ಲಿರುವ ಶಶಿ ಕಾಂಪ್ಲೆಕ್ಸ್ ನಲ್ಲಿ ಅಕ್ಷಯ್ ರಜಪೂತ್ ಕಲ್ಲಡ್ಕ ಮತ್ತು ಗಣೇಶ್ ಪಾಟಾಳಿ ಯವರ ಪಾಲುದಾರಿಕೆಯ ಅಯೋಧ್ಯ ಮೆನ್ಸ್ ಡ್ರೆಸ್ ಶಾಪ್ ಆ.31 ರಂದು ಶುಭಾರಂಭಗೊಂಡಿತು.
ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ.ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ ಡಿ.ವಿ, ಗಣೇಶ್ ಪ್ರಿಂಟರ್ಸ್ ಮಾಲಕ ಉಮೇಶ್ ಪಿ.ಕೆ, ತರುಣ ಘಟಕ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ರಜತ್ ಗೌಡ, ಶಶಿ ಕಾಂಪ್ಲೆಕ್ಸ್ ಮಾಲಕ ಶಶಿಧರ ಆಚಾರ್ಯ, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ಉಬರಡ್ಕ ಮಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಜಿಲ್ಲಾ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಕಾವೇರಿ ಡ್ರೈವಿಂಗ್ ಸ್ಕೂಲ್ ನ ಸಂತೋಷ್ ಮಡ್ತಿಲ, ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಜಯನಗರ, ಮಹೇಶ್ ಕುದ್ಪಾಜೆ, ಚಂದ್ರಶೇಖರ, ಶರತ್ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.
- Advertisement -