- Advertisement -
- Advertisement -
ಕಾಸರಗೋಡು: ಶಾಲಾ ವಿದ್ಯಾರ್ಥಿಗಳ ಎರಡು ಬ್ಯಾಗ್ಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿ ಆತಂಕಕ್ಕೆ ಕಾರಣವಾದ ಘಟನೆ ಉಪ್ಪಳ ಕೈಕಂಬ ಪೇಟೆ ಬಳಿ ನಡೆದಿದೆ.
ಕೈಕಂಬ ಪೇಟೆ ಬಳಿಯ ಮಣ್ಣಿನ ರಾಶಿ ಮೇಲೆ ಬ್ಯಾಗ್ಗಳು ಪತ್ತೆಯಾಗಿದ್ದು, ಆತಂಕಗೊಂಡ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಹಾಗೂ ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದರೂ ಬ್ಯಾಗ್ನ ವಾರಸುದಾರರು ಯಾರೆಂದು ಗೊತ್ತಾಗಲಿಲ್ಲ. ಬಳಿಕ ಸ್ಥಳದಲ್ಲಿ ಪೊಲೀಸರು ಹಾಗೂ ಸ್ಥಳೀಯರು ಕಾವಲು ನಿಂತರು.
ಸಂಜೆ ಇಬ್ಬರು ವಿದ್ಯಾರ್ಥಿಗಳು ಅಲ್ಲಿಗೆ ಬಂದಿದ್ದು, ಅವರನ್ನು ವಿಚಾರಿಸಿದಾಗ ಶಾಲೆಯಲ್ಲಿ ಪರೀಕ್ಷೆಗೆ ಹೆದರಿ ಬ್ಯಾಗ್ಗಳನ್ನು ಇಲ್ಲಿ ಇರಿಸಿ ಮಣ್ಣಂಗುಳಿಯ ಮೈದಾನ ಸಮೀಪ ಅಡಗಿ ಕುಳಿತಿದ್ದುದಾಗಿ ತಿಳಿಸಿದರು. ಬಳಿಕ ಪೊಲೀಸರು ವಿದ್ಯಾರ್ಥಿಗಳ ಹೆತ್ತವರನ್ನು ಕರೆಸಿ ಅವರೊಂದಿಗೆ ಕಳುಹಿಸಿಕೊಟ್ಟರು.
- Advertisement -