



ಬೈರಂಪಳ್ಳಿ: ಮುನಿಯಾಲ್ ಆಯುರ್ವೇದ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್ ಮತ್ತು ಮಹಾಲಸಾ ನಾರಾಯಣಿ ದೇವಸ್ಥಾನ ಹರಿಖಂಡಿಗೆ ಇದರ ಸಹಯೋಗದಲ್ಲಿ ಆಯೋಜಿಸಲಾದ “ಆಯುರ್ಗ್ರಾಮ 2.0” ರಡಿಯಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶ್ರಮಿಕ ತರುಣರ ತಂಡ ಬೈರಂಪಳ್ಳಿಯ ಸಂಸ್ಥಾಪಕರು, ಪಂಚಾಯತ್ ಸದಸ್ಯ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ ಭಾಗವಹಿಸಿದರು. ಸಂಸ್ಥೆಯಿಂದ ನೀಡಲಾದ ಔಷಧೀಯ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಆವರಣದಲ್ಲಿ ಮತ್ತು 41 ನೇ ಶಿರೂರ್ ಗ್ರಾಮದ ಹರಿಕಂಡಿಗೆಯ ಆಯುಷ್ ಡಿಸ್ಪೆನ್ಸರಿ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣಾ ಕ್ಲಿನಿಕ್ ಪೆರ್ಡೂರ್ ನ ಡಾ. ಕೃಷ್ಣ ಪ್ರಸಾದ್ ಭಟ್, ಆಯುಷ್ ಆರೋಗ್ಯ ಕೇಂದ್ರದಿಂದ ಡಾ.ಪ್ರಬಾ ಮುನಿಯಾಲ್ ಆಯುರ್ವೇದ ಇನ್ಸ್ಟಿಟ್ಯೂಟ್ ಸಂಸ್ಥೆಯ ವೈದ್ಯಾಧಿಕಾರಿ ಡಾ. ನವನೀತ್, ವಿದ್ಯಾರ್ಥಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನಾ, ಕಾರ್ಯದರ್ಶಿ ಶ್ರೀಮತಿ ನೇತ್ರಾವತಿ, ಪಂಚಾಯತ್ ಸಿಬ್ಬಂದಿಗಳು,SLRM ಸಿಬ್ಬಂದಿಗಳು ಉಪಸ್ಥಿತರಿದ್ದರು.