Thursday, April 25, 2024
spot_imgspot_img
spot_imgspot_img

ಹಿರಿಯ ಪತ್ರಕರ್ತ, ‘ದಿ ಹಿಂದು’ ಪತ್ರಿಕೆ ವರದಿಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ಯಾಮಸುಂದರ್ ನಿಧನ

- Advertisement -G L Acharya panikkar
- Advertisement -

ಬಳ್ಳಾರಿ(ಅ.20): ಹಿರಿಯ ಪತ್ರಕರ್ತ, ‘ದಿ ಹಿಂದು’ ಪತ್ರಿಕೆ ವರದಿಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ಯಾಮಸುಂದರ್(70) ಹೃದಯಾಘಾತದಿಂದ ಇಂದು ನಿಧನರಾದರು.


ಶ್ಯಾಮಸುಂದರ್ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಶ್ಯಾಮಸುಂದರ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ದಿ ಹಿಂದು ಪತ್ರಿಕೆಯ ವರದಿಗಾರರಾಗಿ, ಇನ್ವೆಸ್ಟಿಗೇಷನ್ ವರದಿಗಾರಿಕೆಯಲ್ಲಿ ಬಂಗಾರದ ಪದಕ ಪಡೆದು, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆಡಿದ್ದರು. ಶ್ಯಾಮಸುಂದರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸಿದೆ.

- Advertisement -

Related news

error: Content is protected !!