- Advertisement -
![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
- Advertisement -
ಬೆಂಗಳೂರು: ಕಳೆದ ರಾತ್ರಿ ಕೆ.ಜಿ.ಹಳ್ಳಿ ಹಾಗೂ ಡಿ.ಜೆ ಹಳ್ಳಿ ಯಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಫೈರಿಂಗ್ ನಲ್ಲಿ ಮೃತರಾದ ಮೂವರ ಅಂತ್ಯಕ್ರಿಯೆಗೆ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ.
![](https://vtvvitla.com/wp-content/uploads/2020/08/IMG-20200622-WA0122.jpg)
ಶವಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು, ಅಂತಿಮ ದರ್ಶನಕ್ಕೆ ಇಡುವಂತಿಲ್ಲ ಎಂದು ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ. ಆಸ್ಪತ್ರೆಯಿಂದ ನೇರವಾಗಿ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![](https://vtvvitla.com/wp-content/uploads/2020/08/a-4.jpg)
ಮೃತರ ಮೂವರ ಪೈಕಿ ಓರ್ವನಿಗೆ ಕೊರೊನಾ ದೃಢ:
ಬೌರಿಂಗ್ ಆಸ್ಪತ್ರೆಯ ಶವಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆಗೆ ಎಫ್ ಎಸ್ ಎಲ್ ವೈದ್ಯರ ತಂಡ ಆಗಮಿಸಿತ್ತು. ಮರಣೋತ್ತರ ಪರೀಕ್ಷೆಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಓರ್ವನ ವರದಿ ಪಾಸಿಟಿವ್ ಬಂದಿದೆ. 20 ವರ್ಷದ ವಾಜಿದ್ ಖಾನ್ ಕೊರೊನಾ ವರದಿ ಪಾಸಿಟಿವ್ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
![](https://vtvvitla.com/wp-content/uploads/2020/08/IMG-20200624-WA0014.jpg)
- Advertisement -