Thursday, April 25, 2024
spot_imgspot_img
spot_imgspot_img

ರೌಡಿಶೀಟರ್ ಹರೀಶ್ ಬರ್ಬರ ಹತ್ಯೆ; ಪ್ರಕರಣ ದಾಖಲು!

- Advertisement -G L Acharya panikkar
- Advertisement -

ಬೆಂಗಳೂರು: ಕಳೆದ ವಾರ ರೌಡಿಶೀಟರ್ ಬಬ್ಲಿ ಮರ್ಡರ್ ಆಗಿದ್ದರೆ ಇಂದು ಮತ್ತೊಬ್ಬ ರೌಡಿಯ ಹೆಣ ಬಿದ್ದಿದೆ. ಸ್ಟೇಷನ್ ಗೆ ಹೋಗಿ ಬರುತ್ತಿದ್ದ ವೇಳೆ ಬಾಣಸವಾಡಿ ರೌಡಿಶೀಟರ್ ಹರೀಶ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ರೌಡಿಶೀಟರ್ ಬಾಣಸವಾಡಿ ಬಿಟ್ಟು ಬಸವೇಶ್ವರ ನಗರದಲ್ಲಿ ವಾಸಿಸುತ್ತಿದ್ದ ಹರೀಶ್ ಎನ್ನಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಗೆ ಇಂದು ಬಂದಿದ್ದ ಹರೀಶ್ ಗೆ ಸಿಆರ್ ಪಿಸಿ 110 ಕೇಸ್ ಹಾಕಿ, ಯಾವುದೆ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಪೊಲೀಸರು ವಾರ್ನ್ ಮಾಡಿ ಕಳಿಸಿದ್ದರು.

ರೌಡಿಶೀಟರ್ ಹರೀಶ್ ಬಾಣಸವಾಡಿ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಅಡ್ಡಗಟ್ಟಿ ಬಂದು ಆತನ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

driving
- Advertisement -

Related news

error: Content is protected !!